ರೈತರಿಗೆ ಸಿಹಿ ಸುದ್ದಿ:  ರೈತ ಸಿರಿ ಯೋಜನೆಯಲ್ಲಿ ಸಿಗಲಿದೆ 10 ಸಾವಿರ ರೂಪಾಯಿಗಳು - Mahanayaka
4:21 PM Thursday 17 - October 2024

ರೈತರಿಗೆ ಸಿಹಿ ಸುದ್ದಿ:  ರೈತ ಸಿರಿ ಯೋಜನೆಯಲ್ಲಿ ಸಿಗಲಿದೆ 10 ಸಾವಿರ ರೂಪಾಯಿಗಳು

raitha siri
03/06/2024

ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೈತರಿಗಾಗಿ  ರೈತ ಸಿರಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸರ್ಕಾರವು ರೈತರಿಗೆ 10 ಸಾವಿರ ರೂಪಾಯಿ ಸಹಾಯ ಧನವನ್ನು ನೀಡುತ್ತಿದೆ.

ಸಣ್ಣ ರೈತರಿಗೆ  10 ಸಾವಿರ ರೂಪಾಯಿ ಸಹಾಯ ಧನವನ್ನು ನೀಡಿ ಅವರನ್ನು ಕೃಷಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಅರ್ಹತೆಗಳೇನು?

* ಸಿರಿ ಧಾನ್ಯಗಳನ್ನು ಬೆಳೆಯುವ ರೈತರು ಈ ಯೋಜನೆಗೆ ಅರ್ಜಿ ಹಾಕಬಹುದು.

* ರಾಗಿ ಬೆಳೆಯನ್ನು ಬೆಳೆಯುವ ರೈತರಿಗೆ ಈ ಯೋಜನೆಯ ಮೊದಲ ಆದ್ಯತೆ ನೀಡಲಾಗಿದೆ.

* ಒಂದು ಹೆಕ್ಟೇರ್ ಕೃಷಿ ಭೂಮಿಯನ್ನು ನೀವು ಹೊಂದಿರಬೇಕು

* ರೈತರ ಭೂಮಿ ಅವರ ಹೆಸರಿನಲ್ಲಿ ಇರಬೇಕು

* ಇದೆ ರೀತಿಯ ಬೇರೆ ಯಾವುದೇ ಸರ್ಕಾರಿ ಯೋಜನೆಯ ಮೂಲಕ ಸಹಾಯ ಧನ ಪಡೆದಿರಬಾರದು.

ಬೇಕಾಗುವ ದಾಖಲೆಗಳು:

* ಮೊಬೈಲ್ ನಂಬರ್,

* ಆಧಾರ್ ಕಾರ್ಡ್ (ಜಮೀನು ಹೆಸರಿನಲ್ಲಿರುವವರದು)

* ಬ್ಯಾಂಕ್ ಖಾತೆ

* ವಿಳಾಸ ಪ್ರಮಾಣ ಪತ್ರ

* ಪಡಿತರ ಚೀಟಿ

* ಜಮೀನಿನ ದಾಖಲೆಗಳು

ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು  https://raitamitra.karnataka.gov.in/ ವೆಬ್ ಸೈಟ್ ಗೆ ಭೇಟಿ ನೀಡಿ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ