ಜನವರಿ 17 ರಂದು ಬೌದ್ಧ ಧರ್ಮ ದೀಕ್ಷಾ ಸಮಾರಂಭ | ಹೆತ್ತೂರ್ ನಾಗರಾಜ್
ಹಾಸನ : ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನ ದಲ್ಲಿ ಜನವರಿ 17 ರಂದು ಹಾಸನ ಜಿಲ್ಲಾ ಮಟ್ಟದ ಬೌದ್ಧ ಧರ್ಮ ದೀಕ್ಷಾ ಸಮಾರಂಭವನ್ನು ಏರ್ಪ ಡಿಸಲಾಗಿದ್ದು , ಅಂದು ನೂರಕ್ಕೂ ಹೆಚ್ಚು ಜನರು ದೀಕ್ಷೆಯನ್ನು ಪಡೆಯಲಿದ್ದಾರೆ ಎಂದು ವಿಶ್ವ ಬುದ್ಧ ಧಮ್ಮ ಸಂಘದ ಜಿಲ್ಲಾ ಸಂಚಾಲಕ ಆರ್.ಪಿ.ಐ. ಸತೀಶ್ ಮತ್ತು ದಲಿತ ಮುಖಂಡರಾದ ಹೆತ್ತೂರ್ ನಾಗರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು , ವಿಶ್ವ ಬುದ್ಧ ಧಮ್ಮ ಸಂಘದಿಂದ 2021 ರ ಅ .14 ರಂದು 10 ಲಕ್ಷ ಜನರು ಬೆಂಗಳೂರಲ್ಲಿ ಮಹಾ ಧಮ್ಮ ದೀಕ್ಷೆ ಪಡೆಯಲಿದ್ದಾರೆ .
ಇದಕ್ಕೂ ಮೊದಲು ಹಾಸನದ ಕಸಾಪ ಭವನದಲ್ಲಿ ಇದೆ ಭಾನುವಾರದಂದು ಬೆಳಿಗ್ಗೆ 11 : 30 ಕ್ಕೆ ಹಾಸನ ಜಿಲ್ಲಾ ಮಟ್ಟದ ಧಮ್ಮ ದೀಕ್ಷೆ ಸಮಾರಂಭ ಜರುಗಲಿದೆ ಎಂದರು. ಮೊದಲು ಪೂಜ್ಯ ಭಿಕ್ಕು ಸಂಘದ ಮಾರ್ಗದರ್ಶನದಲ್ಲಿ ಧಮ್ಮ ದೀಕ್ಷೆಯನ್ನು ಬೆಂಗಳೂರಿನ ನಾಗಸೇನಾ ಬುದ್ಧವಿಹಾರ ಕೇಂದ್ರದ ಭಿಕ್ಕುಣಿ ಬುದ್ಧಮ್ಮ ಮತ್ತು ಧಮ್ಮಚಾರಿ ಡಾ . ಹೆಚ್.ಆರ್, ಸುರೇಂದ್ರ ನಡೆಸಿಕೊಡಲಿದ್ದಾರೆ. ಇದಾದ ಬಳಿಕ ಸಮಾರಂಭ ನಡೆಯಲಿದ್ದು , ಉದ್ಘಾಟನೆಯನ್ನು ಅಂತರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಉದ್ಘಾಟಿಸಲಿದ್ದಾರೆ.

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by <

Provided by

Provided by

Provided by

Provided by
ಅಧ್ಯಕ್ಷತೆಯನ್ನು ವಿ.ಬಿ.ಡಿ.ಎಸ್ , ಪ್ರಧಾನ ಸಂಚಾಲಕ ಎಂ . ವೆಂಕಟಸ್ವಾಮಿ , ಸಕಲೇಶಪು ರದ ಶಾಸಕ ಹೆಚ್.ಕೆ. ಕುಮಾರ ಸ್ವಾಮಿ , ಮಾಜಿ ಮಂತ್ರಿ ಎ . ಮಂಜು, ಬಿ.ಶಿವರಾಮ್ , ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಶ್ವೇತಾದೇವರಾಜು . ಎಂಸಿ ಕಾಲೇಜು ಉಪನ್ಯಾಸಕ ಅತ್ನಿ ಕೃಷ್ಣ , ಬೌದ್ಧ ಮಹಾಸಭಾದ ಅಧ್ಯಕ್ಷ ಇಂದಿರಾ ಬಹದ್ದೂರ್ ಮಾನವ ಬಂಧುತ್ವ ವೇದಿಕೆಯ ಜಿ.ಓ. ಮಹಾಂತಪ್ಪ , ಅಮೋಘ ವಾಣಿ ದಿನಪತ್ರಿಕೆ ಸಂಪಾದಕರಾದ ರಂಗಸ್ವಾಮಿ ಇತರರು ಪಾಲ್ಗೊಳ್ಳುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವಬುದ್ಧ ಧಮ್ಮ ಸಂಘದ ಮುಖಂಡರಾದ ಸ್ಟೀವನ್ ಪ್ರಕಾಶ್ ಜಿಲ್ಲಾ ಕಾರ್ಯದರ್ಶಿ ದೇವರಾಜ ಇತರರು ಉಪಸ್ಥಿತರಿದರು .
ಕೃಪೆ: Jagrutinews