ಅಮಾನುಷ: ಬಕೆಟ್ ಮುಟ್ಟಿದ್ದೇ ತಪ್ಪಂತೆ: 8 ವರ್ಷದ ದಲಿತ ಬಾಲಕನಿಗೆ ಹಲ್ಲೆ - Mahanayaka
8:53 PM Saturday 21 - September 2024

ಅಮಾನುಷ: ಬಕೆಟ್ ಮುಟ್ಟಿದ್ದೇ ತಪ್ಪಂತೆ: 8 ವರ್ಷದ ದಲಿತ ಬಾಲಕನಿಗೆ ಹಲ್ಲೆ

01/04/2024

ರಾಜಸ್ಥಾನದ ಅಲ್ವಾರ್‌ ಎಂಬಲ್ಲಿ ಹ್ಯಾಂಡ್ ಪಂಪ್ ನಿಂದ ನೀರು ತುಂಬಿಸುವಾಗ ಮೇಲ್ಜಾತಿಯ ವ್ಯಕ್ತಿಗೆ ಸೇರಿದ ಬಕೆಟ್ ಮುಟ್ಟಿದ್ದಕ್ಕಾಗಿ ಎಂಟು ವರ್ಷದ ದಲಿತ ಬಾಲಕನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ. ಬಾಲಕನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅಲ್ವಾರ್ ನ ಮಂಗಳೇಶ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಲ್ಕನೇ ತರಗತಿ ವಿದ್ಯಾರ್ಥಿ ಚಿರಾಗ್ ತನ್ನ ಶಾಲೆಯಲ್ಲಿ ಆಳವಡಿಸಲಾದ ಹ್ಯಾಂಡ್ ಪಂಪ್ನಿಂದ ನೀರು ತರಲು ಹೋಗಿದ್ದ.

ಬಾಲಕನ ತಂದೆ ಪನ್ನಾಲಾಲ್ ಅವರು ತನ್ನ ದೂರಿನಲ್ಲಿ, ತನ್ನ ಮಗ ನೀರು ತುಂಬುತ್ತಿದ್ದಾಗ ಆಕಸ್ಮಿಕವಾಗಿ ರಟ್ಟಿರಾಮ್ ಠಾಕೂರ್ಗೆ ಸೇರಿದ ಬಕೆಟ್ ಅನ್ನು ಸ್ಪರ್ಶಿಸಿದ್ದನು ಎಂದು ಹೇಳಿದ್ದಾರೆ.

ಇದರಿಂದ ಕೋಪಗೊಂಡ ಠಾಕೂರ್ ಬಾಲಕನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯ ಬಗ್ಗೆ ಬಾಲಕ ತನ್ನ ಕುಟುಂಬಕ್ಕೆ ತಿಳಿಸಿದ ನಂತರ ಅವರು ಠಾಕೂರ್ ಅವರ ಮನೆಗೆ ಭೇಟಿ ನೀಡಿದರು. ಅಲ್ಲಿ ಅವರು ಕೆಳಜಾತಿಗೆ ಸೇರಿದವರಾಗಿರುವುದರಿಂದ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಘಟನೆಯ ಬಗ್ಗೆ ಕುಟುಂಬ ಸದಸ್ಯರು ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದಾಗ, ಇದು ಪೊಲೀಸ್ ವಿಷಯ ಎಂದು ಹೇಳಿ ಅವರನ್ನು ಠಾಣೆಗೆ ಕಳುಹಿಸಿದ್ದಾರೆ.


Provided by

 

ಕುಟುಂಬ ಸದಸ್ಯರು ರಾಮಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.

ಆರೋಪಿಗಳನ್ನು ಬಂಧಿಸಲು ಪೊಲೀಸರು ತಂಡವನ್ನು ರಚಿಸಿದ್ದಾರೆ

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ