ಅಲೋಪತಿ ಪದ್ಧತಿಯ ಅವಹೇಳನ: ಅಂದು ಸಿಂಹದಂತೆ ಗುಡುಗಿದ್ದ ಬಾಬಾ ರಾಮ್ ದೇವ್ ಈಗ ಮಾಡಿದ್ದೇನು? - Mahanayaka
3:16 AM Thursday 19 - September 2024

ಅಲೋಪತಿ ಪದ್ಧತಿಯ ಅವಹೇಳನ: ಅಂದು ಸಿಂಹದಂತೆ ಗುಡುಗಿದ್ದ ಬಾಬಾ ರಾಮ್ ದೇವ್ ಈಗ ಮಾಡಿದ್ದೇನು?

baba ramdev
23/06/2021

ನವದೆಹಲಿ: ಅಲೋಪತಿ ವೈದ್ಯಕೀಯ ಪದ್ಧತಿಯ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್, ಇದೀಗ ತನ್ನ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಬೆನ್ನಲ್ಲೇ  ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಕೊವಿಡ್ 19 ಚಿಕಿತ್ಸೆಯಲ್ಲಿ ಆಲೋಪತಿ ಪರಿಣಾಮಕಾರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಬಾಬಾ ರಾಮ್ ದೇವ್ ವಿರುದ್ಧ ನಾನಾ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ.  ಈ ಪ್ರಕರಣಗಳ ವಿಚಾರಣೆಗೆ ತಡೆ ನೀಡಬೇಕು ಎಂದು ಅವರು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಇನ್ನೂ ಭಾರತೀಯ ವೈದ್ಯಕೀಯ ಸಂಘ ಪಾಟ್ನಾ ಮತ್ತು ರಾಯ್ ಪುರ ಶಾಖೆಗಳು ದಾಖಲಿಸಿರುವ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ತನ್ನ ವಿರುದ್ಧ ಈ ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಯೋಗಗುರು ಮನವಿ ಮಾಡಿದ್ದಾರೆ.


Provided by

ತಮ್ಮ ಹೇಳಿಕೆಯ ಸಂದರ್ಭದಲ್ಲಿ ನನ್ನ ವಿರುದ್ಧ ಕ್ರಮಕೈಗೊಳ್ಳುವವರು ಈ ಸರ್ಕಾರದಲ್ಲಿ ಯಾರೂ ಇಲ್ಲ ಎಂದು ದರ್ಪದ ಹೇಳಿಕೆಗಳನ್ನು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.  ಇದೀಗ ವಿಚಾರಣೆ ಸಮೀಪಿಸುತ್ತಿದ್ದಂತೆಯೇ, ತನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬಾರದು ಎಂದು ಬಾಬಾ ರಾಮ್ ದೇವ್ ಕೋರ್ಟ್ ಮೊರೆ ಹೋಗಿದ್ದಾರೆ.

ಇತ್ತೀಚಿನ ಸುದ್ದಿ