ಬುದ್ಧಿವಂತ ಸರ್ಕಾರಿ ನೌಕರರು ಅರ್ಥ ಮಾಡಿಕೊಳ್ಳುತ್ತಾರೆ, ಸರ್ಕಾರ ನೌಕರರ ಪರ ಇದೆ: ಅರಗ ಜ್ಞಾನೇಂದ್ರ

ಚಾಮರಾಜನಗರ: ಸರ್ಕಾರ ನೌಕರರ ಪರವಾಗಿ ಸರ್ಕಾರ ಇದೆ, ಬುದ್ಧಿವಂತ ಸರ್ಕಾರಿ ನೌಕರರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಬಿಜೆಪಿ ರಥಯಾತ್ರೆ ಚಾಲನೆ ಕಾರ್ಯಕ್ರಮಕ್ಕೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮುನ್ನ ತಾಳಬೆಟ್ಟದಲ್ಲಿ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿ, 7 ನೇ ವೇತನ ಆಯೋಗ ಜಾರಿ ಸಂಬಂಧ ಮಧ್ಯಂತರ ವರದಿ ಬಂದ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ, ನಮ್ಮ ಸರ್ಕಾರ ಅವಧಿಯಲ್ಲೇ ಸರ್ಕಾರಿ ನೌಕರರಿಗೆ ಎಲ್ಲಾ ಬೆನಿಫಿಟ್ ಕೂಡ ಸಿಕ್ಕಿದೆ, ನೌಕರ ಜೊತೆ ಸಿಎಂ ಮಾತನಾಡುತ್ತಿದ್ದು ಎರಡು ವರ್ಷಗಳು ಕೊರೊನಾ ಇತ್ರು ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ನಮಗೇನು ಹೆದರಿಕೆ ಇಲ್ಲಾ:
ಜೆಡಿಎಸ್, ಕಾಂಗ್ರೆಸ್ ನ ಯಾತ್ರೆಗಳಿಂದ ಬಿಜೆಪಿಗೇನೂ ಭಯವಾಗಿಲ್ಲ, ಅವರುಗಳಿಗೆ ಭಯವಾಗಿರಬೇಕಷ್ಟೇ.., ಚುನಾವಣೆಯ ಸಮಯದಲ್ಲಿ ಜನರ ಬಳಿ ಮತ ಯಾಚಿಸುತ್ತಿದ್ದೇವೆ,ನಾವು ಯಾವಾಗಲೂ ಜನರ ಬಳಿ ಇದ್ದವರು, ಸಾಧನೆ ಹೇಳಲು ಈ ಯಾತ್ರೆ ಎಂದು ತಿಳಿಸಿದರು.
ಕಾಂಗ್ರೆಸ್ ನ ಕಾರ್ಯಕರ್ತರ ವಿಶ್ವಾಸ ವೃದ್ಧಿಸುವ ಸಲುವಾಗಿ ಡಿಕೆಶಿ 141 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ ಅಷ್ಟೇ, ನಮ್ಮದು ಡಬಲ್ ಎಂಜಿನ್ ಸರ್ಕಾರ, ಜನರ ಆಶೋತ್ತರವಾಗಿ ಸ್ಪಂದಿಸುವ ಸರ್ಕಾರ ಎಂದರು.
ಕುಮಾರಸ್ವಾಮಿಗೆ 30 ಸೀಟ್ ಬಂದ್ರೂ ಸಾಕು:
ಕುಮಾರಸ್ವಾಮಿ ಅವರು ಓಡಾಡುತ್ತಿರುವುದು 120 ಸ್ಥಾನಕ್ಕಲ್ಲ, 30 ಸ್ಥಾನಕ್ಕಾಗಿ, ಅವರಿಗೇ 20- 30 ಬಂದರೆ ಸಾಕು, ಸಿಎಂ ಆಗುತ್ತೇನೆ ಎನ್ನುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw