ಅಸ್ಸಾಂನಲ್ಲಿ ಪ್ರವಾಹ: 13 ಜಿಲ್ಲೆಗಳಲ್ಲಿ ಸುಮಾರು 38,000 ಜನರ ಬದುಕು ಅತಂತ್ರ - Mahanayaka
5:12 PM Friday 20 - September 2024

ಅಸ್ಸಾಂನಲ್ಲಿ ಪ್ರವಾಹ: 13 ಜಿಲ್ಲೆಗಳಲ್ಲಿ ಸುಮಾರು 38,000 ಜನರ ಬದುಕು ಅತಂತ್ರ

18/06/2023

ಪ್ರವಾಹ ಬಂದ ಹಿನ್ನೆಲೆಯಲ್ಲಿ ಅಸ್ಸಾಂ ರಾಜ್ಯದ 13 ಜಿಲ್ಲೆಗಳ ಸುಮಾರು 38,000 ಜನರು ಬಾಧಿತರಾಗಿದ್ದಾರೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ತಿಳಿಸಿದೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ಪ್ರಕಾರ, ಲಖಿಂಪುರ ಜಿಲ್ಲೆಯಲ್ಲಿ ಮಾತ್ರ 25,275 ಜನರು ಬಾಧಿತರಾಗಿದ್ದಾರೆ. ದಿಬ್ರುಗಢದಲ್ಲಿ 3857 ಜನರು, ಬಿಸ್ವಾನಾಥ್ ಜಿಲ್ಲೆಯಲ್ಲಿ 3631 ಜನರು ಬಾಧಿತರಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನೇಕ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ ಎಂದು ಎಎಸ್ಡಿಎಂಎ ಉಲ್ಲೇಖಿಸಿದೆ.

ನಿರಂತರ ಮಳೆಯಿಂದಾಗಿ ಈ ಪ್ರದೇಶದ ಅನೇಕ ನದಿಗಳ ನೀರಿನ ಮಟ್ಟವು ಏರುತ್ತಿದೆ. ಬ್ರಹ್ಮಪುತ್ರ ನದಿಯು ಜೋರ್ಹತ್ ಜಿಲ್ಲೆಯ ನೇಮತಿಘಾಟ್, ನಾಗಾವ್ ಜಿಲ್ಲೆಯ ಕಂಪುರದ ಕೊಪಿಲಿ, ಕಮ್ರೂಪ್ ಜಿಲ್ಲೆಯ ಎನ್ಎಚ್ ರಸ್ತೆ ಕ್ರಾಸಿಂಗ್ ನಲ್ಲಿ ಪುಥಿಮರಿಯಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.


Provided by

ಲಖಿಂಪುರ, ಬಿಸ್ವಾನಾಥ್, ಉದಲ್ಗುರಿ, ದರಂಗ್, ಧೇಮಾಜಿ, ದಿಬ್ರುಗಢ, ಹೋಜೈ, ನಾಗಾವ್, ಸೋನಿತ್ಪುರ, ತಿನ್ಸುಕಿಯಾ, ಉದಲ್ಗುರಿ ಜಿಲ್ಲೆಗಳ 23 ಕಂದಾಯ ವಲಯಗಳ ಅಡಿಯಲ್ಲಿ 146 ಗ್ರಾಮಗಳು ಪ್ರವಾಹದಿಂದ ಬಾಧಿತವಾಗಿವೆ.

ಎಎಸ್ಡಿಎಂಎ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಪ್ರವಾಹದ ನೀರು 5 ಒಡ್ಡುಗಳನ್ನು ಮುರಿದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 8 ಇತರ ಒಡ್ಡುಗಳು, 8 ರಸ್ತೆಗಳು, 1 ಸೇತುವೆ, ಕೆಲವು ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 1409.65 ಹೆಕ್ಟೇರ್ ಬೆಳೆ ಭೂಮಿ ನೀರಿನಲ್ಲಿ ಮುಳುಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಡಳಿತವು 17 ಪರಿಹಾರ ವಿತರಣಾ ಕೇಂದ್ರಗಳು ಮತ್ತು ಎರಡು ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ.

ಮತ್ತೊಂದೆಡೆ ಗುವಾಹಟಿಯ ಧೀರೆನ್ಪಾರಾ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ ಮುಕ್ತಾರ್ ಅಲಿ (35 ವರ್ಷ) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ