ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬಾಲಕಿ ಮೃತ್ಯು
ಉಡುಪಿ/ಅಮಾಸೆಬೈಲು: ವಿಪರೀತ ಮಳೆಯಿಂದಾಗಿ ಬಾಲಕಿಯೊಬ್ಬಳು ಹೊಳೆಗೆ ಬಿದ್ದು ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಜು.23ರಂದು ಬೆಳಗ್ಗೆ ಶೇಡಿಮನೆ ಗ್ರಾಮದ ಬಡಾಬೈಲು ಎಂಬಲ್ಲಿ ನಡೆದಿದೆ.
ಮೃತರನ್ನು ಬಡಾಬೈಲುವಿನ ರಚನಾ(13) ಎಂದು ಗುರುತಿಸಲಾಗಿದೆ. 4ನೇ ತರಗತಿ ಓದಿದ್ದ ಈಕೆ, ನಂತರ ಮಾನಸಿಕ ಸಮಸ್ಯೆಯಿಂದ ಶಾಲೆಯನ್ನು ಬಿಟ್ಟು ಮನೆಯಲ್ಲಿಯೇ ಇದ್ದಳು. ತನ್ನ ಅಜ್ಜಿ ಸಾಧಮ್ಮ ಶೆಡ್ತಿ ಅವರೊಂದಿಗೆ ದನ ಕರುಗಳನ್ನು ಮೇಯಿಸುತ್ತಿರುವಾಗ ಗದ್ದೆಯ ಪಕ್ಕದಲ್ಲಿರುವ ಗಂಗಡಬೈಲು ಹೊಳೆ ಬದಿಗೆ ಹೋದ ರಚನಾ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಳು.
ನಂತರ ಸುಮಾರು 2 ಕಿಲೋ ಮೀಟರ್ ದೂರದ ಶೇಡಿಮನೆ ಗ್ರಾಮದ ಮುಂಡುಬೈಲು ಎಂಬಲ್ಲಿನ ಹೊಳೆಯ ನೀರಿನಲ್ಲಿ ಆಕೆಯ ಮೃತದೇಹ ಪತ್ತೆ ಯಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw