ಸ್ಪೀಕರ್ ವಿರುದ್ಧ ಕಾಗದ ಹರಿದು ಎಸೆದ ಎಎಪಿ ಸಂಸದ: ಲೋಕಸಭೆ ಸ್ಪೀಕರ್ ಗರಂ; ಆಪ್ ನಾಯಕನಿಗೆ 'ಅಮಾನತು' ಶಿಕ್ಷೆ - Mahanayaka

ಸ್ಪೀಕರ್ ವಿರುದ್ಧ ಕಾಗದ ಹರಿದು ಎಸೆದ ಎಎಪಿ ಸಂಸದ: ಲೋಕಸಭೆ ಸ್ಪೀಕರ್ ಗರಂ; ಆಪ್ ನಾಯಕನಿಗೆ ‘ಅಮಾನತು’ ಶಿಕ್ಷೆ

03/08/2023

ಸದನದಲ್ಲಿ ಅಶಿಸ್ತು ತೋರಿದ ಆರೋಪದಡಿಯಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಎಎಪಿ ಸಂಸದ ಸುಶೀಲ್ ಕುಮಾರ್ ರಿಂಕು ಅವರನ್ನು ಮುಂಗಾರು ಅಧಿವೇಶನದ ಉಳಿದ ಭಾಗಕ್ಕೆ ಅಮಾನತುಗೊಳಿಸಿದ್ದಾರೆ.


Provided by

ಲೋಕಸಭೆಯು ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ತಿದ್ದುಪಡಿ ಮಸೂದೆ – 2023 ಅನ್ನು ಅಂಗೀಕರಿಸುವಾಗ ಇದನ್ನು ವಿರೋಧಿಸಿ ರಿಂಕು ಅವರು ಸದನದ ಬಾವಿಗಿಳಿದು ಕೆಲವು ಕಾಗದಗಳನ್ನು ಹರಿದು ಸ್ಪೀಕರ್ ಓಂ ಬಿರ್ಲಾ ಅವರತ್ತ ಎಸೆದರು.

ಮಸೂದೆಯನ್ನು ಅಂಗೀಕರಿಸಿದ ನಂತರ ಬಿರ್ಲಾ ಅವರು ಸದನದಲ್ಲಿ ರಿಂಕು ಅವರ ನಡವಳಿಕೆಯನ್ನು ಆಕ್ಷೇಪಿಸಿದರು. ಎಎಪಿ ಸಂಸದನ ಅಮಾನತಿಗೆ ನಿರ್ಣಯ ಮಂಡಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸೂಚಿಸಿದರು.


Provided by

ನಂತರ ಪಂಜಾಬ್‌ನ ಜಲಂಧರ್ ಲೋಕಸಭಾ ಕ್ಷೇತ್ರದ ಸಂಸದ ರಿಂಕು ಅವರನ್ನು ಮುಂಗಾರು ಅಧಿವೇಶನದ ಉಳಿದ ಭಾಗಕ್ಕೆ ಅಮಾನತುಗೊಳಿಸುವ ನಿರ್ಣಯವನ್ನು ಪ್ರಹ್ಲಾದ್ ಜೋಶಿ ಅವರು ಮಂಡಿಸಿದರು.
ರಿಂಕು ಅವರು, ಮಣಿಪುರ ಹಿಂಸಾಚಾರದ ವಿಚಾರದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ರಾಜ್ಯಸಭೆಯ ಎಎಪಿ ಸದಸ್ಯ ಸಂಜಯ್ ಸಿಂಗ್ ಅವರನ್ನು ಮೇಲ್ಮನೆಯಿಂದ ಅಮಾನತುಗೊಳಿಸಿದ ನಂತರ ಸಂಸತ್ ಅಧಿವೇಶನದ ಉಳಿದ ಭಾಗದಿಂದ ಅಮಾನತುಗೊಂಡ ಎರಡನೇ ಎಎಪಿ ಸದಸ್ಯರಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ