ಒಡಿಶಾ ರೈಲು ದುರಂತದ ಸಂತ್ರಸ್ತರಿಗಾಗಿ‌ ಮಿಡಿದ ಮನ: ನೊಂದ ಜೀವಕ್ಕೆ ಸಾಥ್ ನೀಡಲು ಅಮೆರಿಕನ್ ಭಾರತೀಯ ಯುವತಿ ಪಣ - Mahanayaka
5:38 AM Saturday 21 - September 2024

ಒಡಿಶಾ ರೈಲು ದುರಂತದ ಸಂತ್ರಸ್ತರಿಗಾಗಿ‌ ಮಿಡಿದ ಮನ: ನೊಂದ ಜೀವಕ್ಕೆ ಸಾಥ್ ನೀಡಲು ಅಮೆರಿಕನ್ ಭಾರತೀಯ ಯುವತಿ ಪಣ

08/08/2023

ಕೆಲ ತಿಂಗಳ ಹಿಂದೆ ಒಡಿಶಾದ ಬಾಲಾಸೋರ್ ನಲ್ಲಿ ನಡೆದಿದ್ದ ಭೀಕರ ರೈಲು ದುರಂತದ ಸಂತ್ರಸ್ತರಿಗಾಗಿ ಭಾರತೀಯ ಮೂಲದ ಅಮೆರಿಕನ್ ಯುವತಿಯೊಬ್ಬಳ ಮನ ಮಿಡಿದಿದೆ. ಸಂತ್ರಸ್ತರ ಸಹಾಯಕ್ಕಾಗಿ ನಿಧಿ ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿರುವ ಈಕೆ ಈಗಾಗಲೇ ಸುಮಾರು 8 ಲಕ್ಷದ 27 ಸಾವಿರ ರೂಪಾಯಿಗಳಷ್ಟು ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

16 ವರ್ಷ ಪ್ರಾಯದ ಅಮೆರಿಕನ್ ಭಾರತೀಯ ಯುವತಿಯಾಗಿರುವ ತನಿಷ್ಕಾ ಧರಿವಾಲ್ ಎಂಬುವವರು ಈ ಮಾನವೀಯ ಕಾರ್ಯಕ್ಕೆ ಮುಂದಾದವರು. ಒಡಿಶಾದ ಬಾಲಸೋರ್ ನಲ್ಲಿ ನಡೆದ ಭೀಕರ ರೈಲು ದುರಂತದ ಬಗ್ಗೆ ನನಗೆ ತಿಳಿದ ಬಳಿಕ ಆ ದುರಂತದಲ್ಲಿ ಸಂತ್ರಸ್ತರಾದವರಿಗೆ ಮತ್ತು ಅವರ ಕುಟುಂಬಗಳಿಗೆ ನನ್ನ ಕೈಲಾದಷ್ಟು ನೆರವು ನೀಡುವ ಉದ್ದೇಶದಿಂದ ಅಮ್ಮನೊಂದಿಗೆ ಚರ್ಚಿಸಿ ಅವರ ಬೆಂಬಲದೊಂದಿಗೆ ನಿಧಿ ಸಂಗ್ರಹಕ್ಕೆ ಮುಂದಾಗಿದ್ದೇನೆ.

ಈ ಉದ್ದೇಶಕ್ಕಾಗಿ ನಾನು ಶಾಲೆಯನ್ನು, ಗೆಳೆಯರನ್ನು ಮತ್ತು ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಅವರಿಗೆ ನನ್ನ ಉದ್ದೇಶವನ್ನು ತಿಳಿಸಿ, ಇಲ್ಲಿಯವರೆಗೆ 10 ಸಾವಿರ ಡಾಲರ್ ಗಳಷ್ಟು ಹಣವನ್ನು ಸಂಗ್ರಹಿಸಿದ್ದೇನೆ. ನನ್ನ  ಸಣ್ಣದೊಂದು ಪ್ರಯತ್ನ ಆ ಭೀಕರ ರೈಲು ದುರಂತದಲ್ಲಿ ಸಂತ್ರಸ್ತರಾದವರಿಗೆ ನೆರವಾಗಲಿದೆ ಎಂಬ ತೃಪ್ತಿ ನನಗಿದೆ’ ಎಂದಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ