ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಜಾಮೀನು

ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ ಮತ್ತು ಉದ್ಯಮಿ ಮನ್ಸುಖ್ ಹಿರೇನ್ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಫೆಬ್ರವರಿ 25, 2021 ರಂದು, ದಕ್ಷಿಣ ಮುಂಬೈನ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ‘ಆಂಟಿಲಿಯಾ’ ಬಳಿ ಸ್ಫೋಟಕ ತುಂಬಿದ ಎಸ್ಯುವಿ ಪತ್ತೆಯಾಗಿತ್ತು. ಎಸ್ಯುವಿ ಹೊಂದಿದ್ದ ಉದ್ಯಮಿ ಹಿರೆನ್ ಮಾರ್ಚ್ 5, 2021 ರಂದು ನೆರೆಯ ಥಾಣೆಯ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಶರ್ಮಾ ಅವರೊಂದಿಗೆ ಪೊಲೀಸ್ ಅಧಿಕಾರಿಗಳಾದ ದಯಾ ನಾಯಕ್, ವಿಜಯ್ ಸಲಸ್ಕರ್ ಮತ್ತು ರವೀಂದ್ರನಾಥ್ ಆಂಗ್ರೆ ಅವರು ಹಲವಾರು ಎನ್ ಕೌಂಟರ್ ಗಳಲ್ಲಿ 300 ಕ್ಕೂ ಹೆಚ್ಚು ಅಪರಾಧಿಗಳನ್ನು ಕೊಂದ ಮುಂಬೈ ಪೊಲೀಸರ ಎನ್ಕೌಂಟರ್ ತಂಡದ ಸದಸ್ಯರಾಗಿದ್ದರು. 26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಲಾಸ್ಕರ್ ಮೃತಪಟ್ಟಿದ್ದರು. ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರು ಆಂಟಿಲಿಯಾ ಬಾಂಬ್ ಇಟ್ಟ ಪ್ರಕರಣ ಮತ್ತು ಹಿರೆನ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಶರ್ಮಾ ಅವರನ್ನು ಜೂನ್ 2021 ರಲ್ಲಿ ಬಂಧಿಸಲಾಗಿತ್ತು. ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು, ಹಿರೆನ್ ಅವರನ್ನು ನಿರ್ಮೂಲನೆ ಮಾಡಲು ಶರ್ಮಾ ವಾಜೆ ಮತ್ತು ಇತರರೊಂದಿಗೆ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕಾದ ಸಾಂದರ್ಭಿಕ ಪುರಾವೆಗಳ ವಿಷಯವಾಗಿದೆ ಎಂದು ಹೇಳಿದರು.