ದೆಹಲಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆ ಪ್ರಕರಣ: ಇಂದು ತೀರ್ಪು ಪ್ರಕಟ; ಎಲ್ಲರ ಚಿತ್ತ ಕೋರ್ಟ್ ನತ್ತ
ಇಂಡಿಯಾ ಟುಡೇ ಗ್ರೂಪ್ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರ ಹತ್ಯೆಯಾಗಿ ಹದಿನೈದು ವರ್ಷಗಳ ನಂತರ ದೆಹಲಿಯ ಸಾಕೇತ್ ನ್ಯಾಯಾಲಯವು ಇಂದು ಪ್ರಕರಣದ ತೀರ್ಪನ್ನು ಪ್ರಕಟಿಸಲಿದೆ.
ಮಾರ್ಚ್ 2009 ರಲ್ಲಿ ಆರೋಪಿಗಳನ್ನು ಬಂಧಿಸಿದ ನಂತರ ಈ ಪ್ರಕರಣದ ಎಲ್ಲಾ ಪುರಾವೆಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಲು ಪ್ರಾಸಿಕ್ಯೂಷನ್ ಗೆ 13 ವರ್ಷಗಳು ಬೇಕಾಯಿತು. 2010ರ ಫೆಬ್ರವರಿಯಲ್ಲಿ ಆರಂಭವಾದ ವಿಚಾರಣೆ ಇಂದು ಮುಕ್ತಾಯಗೊಳ್ಳಲಿದ್ದು, ಸಾಕೇತ್ ನ್ಯಾಯಾಲಯದಲ್ಲಿ ಪ್ರಕರಣ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
2008 ರಲ್ಲಿ ದೆಹಲಿಯಾದ್ಯಂತ ಆಘಾತಗಳನ್ನು ಉಂಟುಮಾಡಿತ್ತು ಪತ್ರಕರ್ತೆಯ ಕೊಲೆ ಪ್ರಕರಣ.
ಸೆಪ್ಟೆಂಬರ್ 30, 2008 ರಂದು ಹೊಸದಾಗಿ ಪ್ರಾರಂಭವಾದ ಹೆಡ್ ಲೈನ್ಸ್ ಟುಡೇ ಸುದ್ದಿ ಚಾನೆಲ್ ನ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದ ಬಳಿ ತಮ್ಮ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಪತ್ರಕರ್ತೆಯ ತಲೆಗೆ ಗುಂಡು ತಗುಲಿದ ಕಾರಣ ಸಾವನ್ನಪ್ಪಿದ್ದಾರೆ ಎಂದು ವಿಧಿವಿಜ್ಞಾನ ವರದಿಗಳು ಹೇಳಿತ್ತು. ಹೀಗಾಗಿ ಕೊಲೆ ತನಿಖೆಯನ್ನು ಪ್ರಾರಂಭಿಸಲಾಗಿದೆ. ಪತ್ರಕರ್ತೆಯು ತನ್ನ ಕಚೇರಿಯಿಂದ ತಡರಾತ್ರಿ ಮನೆಗೆ ಹಿಂದಿರುಗುತ್ತಿದ್ದಳು ಎಂದು ಪೊಲೀಸ್ ಸಂಶೋಧನೆಗಳು ಹೇಳಿವೆ. ಪತ್ರಕರ್ತೆಯನ್ನು ಬೆನ್ನಟ್ಟಿ ವಾಹನದಿಂದ ಗುಂಡು ಹಾರಿಸಿರಬಹುದು ಎಂದು ಹೇಳಲಾಗಿತ್ತು.
ಸಿಸಿಟಿವಿ ದೃಶ್ಯಾವಳಿಗಳು ಈ ಪ್ರದೇಶದಲ್ಲಿ ಸೌಮ್ಯರ ಚಲನವಲನಗಳನ್ನು ಪತ್ತೆಹಚ್ಚಿದ್ದು, ಅವರನ್ನು ಹಿಂಬಾಲಿಸುತ್ತಿರುವ ಕಾರೊಂದು ಪತ್ತೆಯಾಗಿದೆ. ಮುಂಬೈ ಮೂಲದ ಅಪರಾಧ ವಿಭಾಗದ ತಂಡಗಳನ್ನು ಕರೆಸಲಾಗಿದ್ದು, ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಲು ಈ ಪ್ರದೇಶದಲ್ಲಿ ಸಮಗ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.