ವಿಶ್ವಕಪ್ ಫೈನಲ್ ಲಕ್ನೋದಲ್ಲಿ ನಡೆಯುತ್ತಿದ್ರೆ ಭಾರತ ವಿಶ್ವಕಪ್ ಗೆಲ್ಲುತ್ತಿತ್ತು: ಬಿಜೆಪಿಗೆ ಟಾಂಗ್ ನೀಡಿದ ಅಖಿಲೇಶ್ ಯಾದವ್ - Mahanayaka

ವಿಶ್ವಕಪ್ ಫೈನಲ್ ಲಕ್ನೋದಲ್ಲಿ ನಡೆಯುತ್ತಿದ್ರೆ ಭಾರತ ವಿಶ್ವಕಪ್ ಗೆಲ್ಲುತ್ತಿತ್ತು: ಬಿಜೆಪಿಗೆ ಟಾಂಗ್ ನೀಡಿದ ಅಖಿಲೇಶ್ ಯಾದವ್

22/11/2023

ಬಿಜೆಪಿ ವಿರುದ್ಧ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪಂದ್ಯ ಅಹಮದಾಬಾದ್ ನ ಬದಲು ಲಕ್ನೋದಲ್ಲಿ ನಡೆದಿದ್ದರೆ ಟೀಮ್ ಇಂಡಿಯಾ ಹೈ ವೋಲ್ಟೇಜ್ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಪಿ ಮುಖ್ಯಸ್ಥರು, ಪಂದ್ಯವು ಲಕ್ನೋದಲ್ಲಿ ನಡೆದಿದ್ದರೆ, ಟೀಮ್ ಇಂಡಿಯಾಕ್ಕೆ ವಿಷ್ಣು ಮತ್ತು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಶೀರ್ವಾದ ಸಿಗುತ್ತಿತ್ತು ಎಂದು ಹೇಳಿದರು.


Provided by

ಲಕ್ನೋದ ಕ್ರಿಕೆಟ್ ಕ್ರೀಡಾಂಗಣವನ್ನು ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರವು ‘ಏಕನಾ ಕ್ರೀಡಾಂಗಣ’ ಎಂದು ಹೆಸರಿಸಿತ್ತು. ವಿಶೇಷವೆಂದರೆ, ಏಕನಾ ವಿಷ್ಣುವಿನ ಅನೇಕ ಹೆಸರುಗಳಲ್ಲಿ ಒಂದಾಗಿದೆ.

ನಂತರ 2018 ರಲ್ಲಿ, ಯೋಗಿ ಆದಿತ್ಯನಾಥ್ ಸರ್ಕಾರವು ಇದನ್ನು ‘ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣ’ ಎಂದು ಮರುನಾಮಕರಣ ಮಾಡಿತ್ತು.
ಗುಜರಾತ್ ನಲ್ಲಿ ನಡೆದ ಪಂದ್ಯ (ವಿಶ್ವಕಪ್ 2023 ಫೈನಲ್) ಲಕ್ನೋದಲ್ಲಿ ನಡೆದಿದ್ದರೆ, ಅವರು (ಟೀಮ್ ಇಂಡಿಯಾ) ಅನೇಕರ ಆಶೀರ್ವಾದವನ್ನು ಪಡೆಯುತ್ತಿದ್ದರು. ಫೈನಲ್ ಪಂದ್ಯವು ಅಲ್ಲಿ (ಲಕ್ನೋ) ನಡೆದಿದ್ದರೆ, ಟೀಮ್ ಇಂಡಿಯಾಕ್ಕೆ ವಿಷ್ಣು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಆಶೀರ್ವಾದ ಸಿಗುತ್ತಿತ್ತು ಮತ್ತು ಭಾರತ ಗೆಲ್ಲುತ್ತಿತ್ತು ” ಎಂದು ಎಸ್ಪಿ ಮುಖ್ಯಸ್ಥರು ಉತ್ತರ ಪ್ರದೇಶದ ಇಟಾವಾದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.


Provided by

ಇತ್ತೀಚಿನ ಸುದ್ದಿ