ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಹಿನ್ನೆಲೆ: ಡಿಸೆಂಬರ್ 6 ರಂದು 'ಇಂಡಿಯಾ' ಮೈತ್ರಿಕೂಟದ ತುರ್ತು ಸಭೆ ಕರೆದ ಕಾಂಗ್ರೆಸ್ - Mahanayaka
1:08 AM Monday 16 - September 2024

ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಹಿನ್ನೆಲೆ: ಡಿಸೆಂಬರ್ 6 ರಂದು ‘ಇಂಡಿಯಾ’ ಮೈತ್ರಿಕೂಟದ ತುರ್ತು ಸಭೆ ಕರೆದ ಕಾಂಗ್ರೆಸ್

04/12/2023

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಸೋತ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷಗಳ ಮೈತ್ರಿಕೂಟಗಳ ಸಭೆಯನ್ನು ಡಿಸೆಂಬರ್ 6 ರ ಬುಧವಾರದಂದು ನವದೆಹಲಿಯಲ್ಲಿ ಕರೆದಿದೆ. ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ ಸಿ), ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಮೈತ್ರಿ ಪಾಲುದಾರರಿಗೆ ಕರೆ ಮಾಡಿ ಸಭೆಯ ಬಗ್ಗೆ ಮಾಹಿತಿ ನೀಡಿದರು.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ನಡೆದ ಚುನಾವಣಾ ಫಲಿತಾಂಶದ ಕೆಲವು ದಿನಗಳ ನಂತರ ಈ ಸಭೆ ನಡೆಯಲಿದೆ. ಡಿಸೆಂಬರ್ 3 ರ ಫಲಿತಾಂಶವು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ನಿರ್ಣಾಯಕ ಮುನ್ನುಡಿಯಾಗಿರುವುದರಿಂದ ಮುಂದಿನ ‘ಇಂಡಿಯಾ’ ಬಣದ ಸಭೆ ಮಹತ್ವದ್ದಾಗಿದೆ.

‘ಇಂಡಿಯಾ’ವು ಕಾಂಗ್ರೆಸ್ ನೇತೃತ್ವದ ದೊಡ್ಡ ರಾಜಕೀಯ ಪಕ್ಷಗಳ ಒಕ್ಕೂಟವಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿಎ) ವನ್ನು ಎದುರಿಸಲು ಇದನ್ನು ರಚಿಸಲಾಯಿತು. ಜುಲೈ 2023 ರಲ್ಲಿ ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷದ ಸಭೆಯಲ್ಲಿ ಇದನ್ನು ರಚಿಸಲಾಗಿತ್ತು.


Provided by

ಇತ್ತೀಚಿನ ಸುದ್ದಿ