ಗಾಝಾ ವೇದನೆ, ಇಸ್ರೇಲ್ ಕ್ರೌರ್ಯವನ್ನು ಬಯಲಿಗೆಳೆದ ಫೆಲೆಸ್ತೀನಿ ಪತ್ರಕರ್ತರಿಗೆ ಯುನೆಸ್ಕೋ ಪುರಸ್ಕಾರ
ಗಾಝಾದಲ್ಲಿ ಇಸ್ರೇಲ್ ನ ಕ್ರೌರ್ಯ ಮತ್ತು ಜನರ ವೇದನೆಯನ್ನು ಜಗತ್ತಿನ ಮುಂದಿಟ್ಟ ಫೆಲೆಸ್ತೀನಿ ಪತ್ರಕರ್ತರಿಗೆ ಯುನೆಸ್ಕೋ ಪುರಸ್ಕಾರ ಲಭಿಸಿದೆ.
ಕತ್ತಲೆ ಮತ್ತು ನಿರಾಶೆಯ ಈ ಕಾಲಘಟ್ಟದಲ್ಲಿ ಮತ್ತು ಸವಾಲುಗಳ ಆಘಾತಕಾರಿ ಸನ್ನಿವೇಶದಲ್ಲಿ ವರದಿ ಮಾಡುತ್ತಿರುವ ಫೆಲೆಸ್ತೀನಿ ಪತ್ರಕರ್ತರ ಜೊತೆ ನಾವಿದ್ದೇವೆ ಎಂಬುದನ್ನು ಪ್ರಬಲವಾಗಿ ಸಾರುವುದಕ್ಕೆ ಈ ಸಂದರ್ಭವನ್ನು ನಾವು ಬಳಸಿಕೊಳ್ಳುತ್ತೇವೆ ಎಂದು ಇಂಟರ್ನ್ಯಾಷನಲ್ ಜೂರಿ ಆಫ್ ಮೀಡಿಯಾ ಪ್ರೊಫೆಷನಲ್ ನ ಚೇರ್ಮನ್ ಮೌರೀಶ್ ಸ್ಪಷ್ಟಪಡಿಸಿದ್ದಾರೆ.
ಮನುಷ್ಯತ್ವ ಎಂಬ ನೆಲೆಯಲ್ಲಿ ಈ ಪತ್ರಕರ್ತರ ಧೈರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಅವರು ನೀಡುತ್ತಿರುವ ಕೊಡುಗೆಯನ್ನು ನಾವು ಈ ಸಂದರ್ಭದಲ್ಲಿ ಗೌರವಿಸುತ್ತೇವೆ ಎಂದವರು ಹೇಳಿದ್ದಾರೆ. 1997ರಿಂದ ಈ ಪುರಸ್ಕಾರವನ್ನು ನೀಡಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth