ಮಣ್ಣಿನಡಿಯಲ್ಲಿ ಸಮಾಧಿ ಮಾಡಲಾಗಿದ್ದ ಪುರಾತನ ಬೌದ್ಧ ವಿಹಾರ ಪತ್ತೆ
ಜಾರ್ಖಂಡ್ : ಸುಮಾರು 900 ವರ್ಷಗಳಿಗೂ ಅಧಿಕ ಹಳೆಯ ಬೌದ್ಧ ವಿಹಾರವೊಂದು ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಗಿದ್ದು, ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ ಐ) ಈ ಬೌದ್ಧ ವಿಹಾರವನ್ನು ಪತ್ತೆ ಮಾಡಿದೆ.
ಎಎಸ್ ಐನ ಪಾಟ್ನಾ ಶಾಖೆಯ ತಂಡವು ಜುಲ್ಜುಲ್ ಪಹಾರ್ ಬಳಿಯ ಬುರ್ಹಾನಿ ಗ್ರಾಮದಲ್ಲಿ ದೇವತೆ ತಾರಾ ಮತ್ತು ಬುದ್ಧನ 10 ಕಲ್ಲಿನ ಪ್ರತಿಮೆಗಳನ್ನು ಪತ್ತೆ ಮಾಡಿದ್ದು, ಈ ವಿಹಾರವನ್ನು ಮಣ್ಣಿನಡಿಯಲ್ಲಿ ಸಮಾಧಿ ಮಾಡಲಾಗಿತ್ತು ಎಂದು ಶಂಕಿಸಲಾಗಿದೆ.
ಈ ಬೌದ್ಧ ವಿಹಾರವು ಸಾರನಾಥದಿಂದ 10 ಕಿ.ಮೀ. ದೂರದಲ್ಲಿದ್ದು, ವಾರಣಸಿಯ ಹಳೆಯ ಮಾರ್ಗದಲ್ಲಿದೆ. ಹೀಗಾಗಿ ಇದೇ ಪ್ರದೇಶದಲ್ಲಿ ಭಗವಾನ್ ಗೌತಮ ಬುದ್ಧರು ತಮ್ಮ ಮೊದಲ ಧರ್ಮೋಪದೇಶ ನೀಡಿರುವ ಕಾರಣ ಬೌದ್ಧ ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲು ಈ ಸಂಶೋಧನೆ ಹಾಗೂ ಇಲ್ಲಿ ಪತ್ತೆಯಾಗಿರುವ ವಿಹಾರ ಬುದ್ಧರ ಮೂರ್ತಿಗಳು ಸಹಾಯ ಮಾಡಲಿವೆ ಎಂದು ಪುರತತ್ವಜ್ಞರು ತಿಳಿಸಿದ್ದಾರೆ.

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by <

Provided by

Provided by

Provided by

Provided by
ಉತ್ಕನನದ ಸಂದರ್ಭದಲ್ಲಿ ನಾಲ್ಕು-ಐದು ಪದಗಳ ಲಿಪಿ ಕೂಡ ಪತ್ತೆಯಾಗಿದೆ ಎಂದು ಪುರತತ್ವಜ್ಞರು ಹೇಳಿದ್ದಾರೆ. ಇದನ್ನು ಡೀಕೋಡಿಂಗ್ ಮಾಡಲು ಮೈಸೂರಿಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಇಲ್ಲಿ ಪತ್ತೆಯಾಗಿರುವ ಲಿಪಿ ನಾಗ್ರಿ ಲಿಪಿ ಆಗಿರಬಹುದು ಎಂದು ಪುರತತ್ವಜ್ಞರು ಹೇಳಿದ್ದಾರೆ.