ಮದುವೆಯಾಗಲು ಮೆರವಣಿಗೆಯಲ್ಲಿ ಬಂದ ವರನಿಗೆ ಕಾದಿತ್ತು ಶಾಕ್: ಮದುವೆ ಸ್ಥಳದಲ್ಲಿ ಇರಲಿಲ್ಲ ಯುವತಿ, ಆಕೆಯ ಮನೆಯವ್ರು..!
ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಯುವಕನೋರ್ವ ತನ್ನ ಭಾವಿ ಅತ್ತೆ-ಮಾವನ ಮನೆಯನ್ನು ಹುಡುಕಲು ಸಾಧ್ಯವಾಗದ ಕಾರಣ ತನ್ನ ಸಂಪೂರ್ಣ ಬ್ಯಾಂಡ್, ಬಾಜಾ (ಸಂಗೀತ) ಮತ್ತು ಬರಾತ್ (ವಿವಾಹ ಮೆರವಣಿಗೆ) ನೊಂದಿಗೆ ಮರಳಬೇಕಾದ ಘಟನೆ ನಡೆದಿದೆ. ಸೋನು ಎಂದು ಗುರುತಿಸಲ್ಪಟ್ಟ ವರನು ತನ್ನ ‘ಬಾರಾತ್’ ನೊಂದಿಗೆ ಲಕ್ನೋದ ರಹೀಮಾಬಾದ್ ಪ್ರದೇಶಕ್ಕೆ ಆಗಮಿಸಿದ್ದ. ಆದರೆ ಮದುವೆ ಸ್ಥಳ ಮತ್ತು ವಧುವಿನ ಕುಟುಂಬವನ್ನು ಒದಗಿಸಿದ ವಿಳಾಸದಲ್ಲಿ ಕಂಡುಹಿಡಿಯಲು ವಿಫಲನಾಗಿದ್ದಾನೆ.
ಇನ್ನು ರಾತ್ರಿಯಿಡೀ ಯುವಕ ವಧು ಮತ್ತು ಅವಳ ತಂದೆಯನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾನೆ. ಆದರೆ ಅವರ ಫೋನ್ಗಳು ಸ್ವಿಚ್ ಆಫ್ ಆಗಿದ್ದವು. ಈ ಪ್ರದೇಶದಲ್ಲಿ ವಿಚಾರಿಸಿದಾಗ ಅಂತಹ ಯಾವುದೇ ವ್ಯಕ್ತಿಗಳು ಅಸ್ತಿತ್ವದಲ್ಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸೋನು ಪ್ರಕಾರ ಅವರು ಚಂಡೀಗಢದಲ್ಲಿ ಕಾಜಲ್ ಎಂಬ ಮಹಿಳೆಯನ್ನು ಭೇಟಿ ಮಾಡಿದ್ದರು. ಅವರು ಪ್ರಣಯ ಸಂಬಂಧವನ್ನು ಬೆಳೆಸಿ ಮದುವೆಯಾಗಲು ನಿರ್ಧರಿಸಿದ್ದರು. ಅವರು ಕಾಜಲ್ ಅವರ ತಂದೆ ಶೀಶ್ಪಾಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಅವರು ಮದುವೆಗೆ ಒಪ್ಪಿಕೊಂಡರು ಮತ್ತು ಜುಲೈ 11 ರಂದು ಮದುವೆಯ ದಿನಾಂಕವನ್ನು ಅಂತಿಮಗೊಳಿಸಿದ್ದರು.
ಜುಲೈ 10 ರಂದು ಯುವಕ ಸೋನು, ಕಾಜಲ್ ಅವರೊಂದಿಗೆ ಮಾತನಾಡಿದ್ದರು. ಅವರು ಎಲ್ಲಾ ಮದುವೆಯ ವ್ಯವಸ್ಥೆಗಳು ಪೂರ್ಣಗೊಂಡಿವೆ ಮತ್ತು ಸಂಬಂಧಿಕರು ಈಗಾಗಲೇ ತಮ್ಮ ಮನೆಯಲ್ಲಿ ಜಮಾಯಿಸಿದ್ದಾರೆ ಎಂದಿದ್ದರು.
‘ಈಗ ಬಾರಾತ್ ನೊಂದಿಗೆ ಬನ್ನಿ, ನಾನು ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ’ ಎಂದು ಅವರು ನನಗೆ ಹೇಳಿದರು” ಎಂದು ಸೋನು ಹೇಳಿದ್ದಾರೆ.
ಈ ಸಂಭಾಷಣೆಯ ನಂತರ ಕಾಜಲ್ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಸೋನು ತನ್ನ ಬಾರಾತ್ ನೊಂದಿಗೆ ಒದಗಿಸಿದ ವಿಳಾಸಕ್ಕೆ ಬಂದಾಗ ವಧು ಅಥವಾ ಅವಳ ಕುಟುಂಬವನ್ನು ಕಾಣಲು ಸಾಧ್ಯವಾಗಲಿಲ್ಲ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಲಕ್ನೋ ಪೊಲೀಸ್ ಜಂಟಿ ಆಯುಕ್ತ ಆಕಾಶ್ ಕುಲ್ಹಾರಿ, “ಪ್ರಕರಣ ದಾಖಲಾಗಿದ್ದು, ಮದುವೆ ಮೆರವಣಿಗೆಗೆ ವರನನ್ನು ಆಹ್ವಾನಿಸಿ ನಂತರ ಕಣ್ಮರೆಯಾದ ಕಾಜಲ್ ಮತ್ತು ಅವರ ಕುಟುಂಬವನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth