ದೇಶದಲ್ಲಿ ನಿರುದ್ಯೋಗದ ಕುಣಿತ: ಮುಂಬೈ ವಿಮಾನ ನಿಲ್ದಾಣದಲ್ಲಿ ಕೇವಲ 600 ಉದ್ಯೋಗ ಸಂದರ್ಶನಕ್ಕೆ ಬಂದ 25,000 ಮಂದಿ ಅಭ್ಯರ್ಥಿಗಳು
ಭಾರತದ ಯುವಜನರು ಎದುರಿಸುತ್ತಿರುವ ನಿರುದ್ಯೋಗದ ಬಿಕ್ಕಟ್ಟಿನ ಮಧ್ಯೆ ಏರ್ ಇಂಡಿಯಾ ಏರ್ ಪೋರ್ಟ್ ಸರ್ವೀಸಸ್ ಲಿಮಿಟೆಡ್ ಆಯೋಜಿಸಿದ್ದ ವಾಕ್-ಇನ್ ಸಂದರ್ಶನಕ್ಕಾಗಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಮುಂಬೈನ ಕಲಿನಾ ಪ್ರದೇಶದಲ್ಲಿ ಜಮಾಯಿಸಿದರು.
ವಿವಿಧ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ಒಳಗೊಂಡ ‘ಹ್ಯಾಂಡಿಮ್ಯಾನ್’ ಉದ್ಯೋಗಕ್ಕಾಗಿ ಕಂಪನಿಯು 2,216 ಹುದ್ದೆಗಳು ಖಾಲಿ ಇದೆ ಎಂದು ಜಾಹೀರಾತು ನೀಡಿತ್ತು. ಸೀಮಿತ ಸಂಖ್ಯೆಯ ಖಾಲಿ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯ ಅರ್ಜಿದಾರರು ಕಾಣಿಸಿಕೊಂಡರು. ಇದು ನೇಮಕಾತಿ ಕಚೇರಿಯ ಹೊರಗೆ ಅನಿಯಂತ್ರಿತ ಪರಿಸ್ಥಿತಿಗೆ ಕಾರಣವಾಯಿತು.
ಕೇವಲ 600 ಖಾಲಿ ಹುದ್ದೆಗಳಿಗೆ ಪರೀಕ್ಷೆ ಎದುರಿಸಲು 25,000+ ಅಭ್ಯರ್ಥಿಗಳು ಬಂದಿದ್ದರಿಂದ ನೇಮಕಾತಿ ಕಚೇರಿಯ ಹೊರಗಿನ ದೃಶ್ಯವು ಗೊಂದಲಮಯವಾಗಿತ್ತು. ಇದು ದೇಶದಲ್ಲಿನ ನಿರುದ್ಯೋಗದ ಭೀಕರ ಸ್ಥಿತಿಯ ಸಂಪೂರ್ಣ ಪ್ರತಿಬಿಂಬವಾಗಿದೆ. ಕೊನೆಗೆ ನಿಯಂತ್ರಣ ಮಾಡಕ್ಕಾಗದೇ ಸಂಘಟಕರು ಅರ್ಜಿದಾರರನ್ನು ತಮ್ಮ ಸ್ವವಿವರಗಳನ್ನು ಮಾತ್ರ ಕೊಡುವಂತೆ ಹೇಳಿ ಗುಂಪನ್ನು ಚದುರಿಸಿದರು.
ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಅನೇಕರು ಈ ಘಟನೆಯನ್ನು ರಾಷ್ಟ್ರದ ನಿರುದ್ಯೋಗ ಸಮಸ್ಯೆಗಳ ಸ್ಪಷ್ಟ ಸೂಚಕವೆಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಉದ್ಯೋಗ ಮತ್ತು ಆರ್ಥಿಕ ನೀತಿಗಳನ್ನು ಪ್ರಸ್ತುತ ಆಡಳಿತವು ನಿರ್ವಹಿಸುತ್ತಿರುವ ರೀತಿಯನ್ನು ಟೀಕಿಸಲು ಈ ಘಟನೆಯನ್ನು ಬಳಸಿಕೊಂಡಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth