ಇನ್ನಷ್ಟು ಸಚಿವರಿಗೆ ಸಿಡಿ ಭೀತಿ! | ಮೀಡಿಯಾದವರು ಇರೋಬರೋದೆಲ್ಲ ತೋರಿಸ್ತಾರೆ ಎಂದ ಸಚಿವ! - Mahanayaka
2:51 PM Friday 20 - September 2024

ಇನ್ನಷ್ಟು ಸಚಿವರಿಗೆ ಸಿಡಿ ಭೀತಿ! | ಮೀಡಿಯಾದವರು ಇರೋಬರೋದೆಲ್ಲ ತೋರಿಸ್ತಾರೆ ಎಂದ ಸಚಿವ!

06/03/2021

ಬೆಂಗಳೂರು:  ಮೈತ್ರಿ ಸರ್ಕಾರ ಕೆಡವಿ ಸರ್ಕಾರ ರಚಿಸಿದ ಬಳಿಕ ಇದೀಗ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಿಡುಗಡೆಯಾಗಿದೆ. ಇದೇ ಸಂದರ್ಭದಲ್ಲಿ ಇತರ ಸಚಿವರಿಗೂ ಇದೀಗ ಸಿಡಿ ಅಥವಾ ಮಾನಹಾನಿಕರ ಸುದ್ದಿಯ ಭೀತಿ ಸೃಷ್ಟಿಯಾಗಿದೆ.

ಈಗಾಗಲೇ 6 ಸಚಿವರುಗಳು ತಮ್ಮ ವಿರುದ್ಧ ಮಾನಹಾನಿಕಾರಕ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ಕೋರ್ಟ್ ಮೊರೆ ಹೋಗಿದ್ದಾರೆ.  ಉಳಿದ ಸಚಿವರೂ ಕೋರ್ಟ್​ಗೆ ಅರ್ಜಿ ಹಾಕುತ್ತಾರೆ. ಇಂದು ಅಥವಾ ನಾಡಿದ್ದು(ಸೋಮವಾರ) ಉಳಿದ ಸಚಿವರು ಅರ್ಜಿ ಹಾಕಲಿದ್ದಾರೆ ಸಚಿವ ಸೋಮಶೇಖರ್ ಎಂದು ಅವರು  ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ ಬೆನ್ನಲ್ಲೇ ಈ ಸಿಡಿ ವಿರುದ್ಧ ಬಿಜೆಪಿ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದರು. ಯಾರೊಬ್ಬರು ಸಚಿವರು ಕೂಡ ರಮೇಶ್ ಜಾರಕಿಹೊಳಿ ವಿರುದ್ಧ ಮಾತನಾಡಿಲ್ಲ. ಇದೀಗ ಹೊಸ ಬೆಳವಣಿಯ ಪ್ರಕಾರ 6 ಸಚಿವರು ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಸಿಡಿ ಭೀತಿ ಇರುವ ಇನ್ನಷ್ಟು ಸಚಿವರು ಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ.


Provided by

ಕೆಲ ಮಾಧ್ಯಮಗಳಲ್ಲಿ ಇರೋಬರೋದೆಲ್ಲ ಹಾಕಿ ಅವಮಾನ ಮಾಡ್ತಾರೆ. ಒಳ್ಳೇದು-ಕೆಟ್ಟದು ಅಂತ ನೋಡಲ್ಲ. ಅದಕ್ಕಾಗಿ ನಾವು ಕೋರ್ಟ್​ಗೆ ಮೊರೆ ಹೋಗಿದ್ದೀವಿ ಎಂದು ಸೋಮಶೇಖರ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ