ಶ್ರೀಲಂಕಾದಿಂದ ಇಬ್ಬರು ಭಾರತೀಯ ಮೀನುಗಾರರ ಬಿಡುಗಡೆ: ಮತ್ತೋರ್ವ ಮೀನುಗಾರರ ಮೃತದೇಹ ಹಸ್ತಾಂತರ
ಶ್ರೀಲಂಕಾ ನೌಕಾಪಡೆಯು ಬಂಧಿತ ಇಬ್ಬರು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ. ಶನಿವಾರ ಮುಂಜಾನೆ ಅಂತರರಾಷ್ಟ್ರೀಯ ಕಡಲ ಗಡಿ ರೇಖೆಯ (ಐಎಂಬಿಎಲ್) ಬಳಿ ಮೀನುಗಾರನ ಅವಶೇಷಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿತು.
ರಾಮೇಶ್ವರಂ ಕರಾವಳಿಯಲ್ಲಿ ನಿಯೋಜಿಸಲಾಗಿದ್ದ ಭಾರತೀಯ ನೌಕಾಪಡೆಯ ಹಡಗು ಐ. ಎನ್. ಎಸ್. ಬಿತ್ರಾ, ಶ್ರೀಲಂಕಾದ ನೌಕಾಪಡೆಯೊಂದಿಗೆ ಸಮನ್ವಯ ಸಾಧಿಸಿ, ಮೀನುಗಾರರು ಮತ್ತು ಮೀನುಗಾರರ ಶವವನ್ನು ಮುಂಜಾನೆ 1 ಗಂಟೆಗೆ ಸಮುದ್ರಕ್ಕೆ ಬರಮಾಡಿಕೊಂಡಿತು.
ಭಾರತೀಯ ನೌಕಾಪಡೆಯ ಹಡಗು ನಂತರ ತಮಿಳುನಾಡಿನ ರಾಮೇಶ್ವರಂಗೆ ತೆರಳಿತು. ಅಲ್ಲಿ ನೌಕಾ ದಳದ ತುಕಡಿಯ ನೌಕಾ ಅಧಿಕಾರಿಯು ಮರೀನ್ ಪೊಲೀಸ್ ಮತ್ತು ತಮಿಳುನಾಡು ಮೀನುಗಾರಿಕೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಮೃತ ದೇಹಗಳನ್ನು ಮತ್ತು ಮೀನುಗಾರರನ್ನು ವರ್ಗಾಯಿಸಿದರು.
ಆಗಸ್ಟ್ 1 ರಂದು ರಾಮೇಶ್ವರಂನ ಮೀನುಗಾರ ಮತ್ತು ಇನ್ನೊಬ್ಬರು ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ ತಮ್ಮ ಯಾಂತ್ರಿಕೃತ ಮೀನುಗಾರಿಕೆ ದೋಣಿ ಶ್ರೀಲಂಕಾದ ನೌಕಾಪಡೆಯ ಹಡಗಿಗೆ ಡಿಕ್ಕಿ ಹೊಡೆದ ನಂತರ ನಾಪತ್ತೆಯಾಗಿದ್ದರು.
ಅಕ್ರಮ ಮೀನುಗಾರಿಕೆಯ ಆರೋಪದ ಮೇಲೆ ಮೀನುಗಾರರನ್ನು ಬಂಧಿಸಲು ಶ್ರೀಲಂಕಾದ ನೌಕಾಪಡೆಯು ಪ್ರಯತ್ನಿಸಿದಾಗ ದೋಣಿ ಮುಳುಗಿತು. ರಾಮೇಶ್ವರಂನ ನಾಲ್ವರು ಮೀನುಗಾರರು ದೋಣಿ ಮುಳುಗಿದ ನಂತರ ಸಮುದ್ರಕ್ಕೆ ಬಿದ್ದಿದ್ದಾರೆ.
ಓರ್ವ ಮೀನುಗಾರ ಸಾವನ್ನಪ್ಪಿದ್ರೆ ಮತ್ತೊಬ್ಬ ನಾಪತ್ತೆಯಾದರೆ, ಇತರ ಇಬ್ಬರನ್ನು ಶ್ರೀಲಂಕಾದ ಅಧಿಕಾರಿಗಳು ಬಂಧಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth