ಕೇಂದ್ರ ಬಜೆಟ್: ಅನಿವಾಸಿ ಭಾರತೀಯರ ನಿರೀಕ್ಷೆ ಮತ್ತು ನಿರಾಸೆ - Mahanayaka

ಕೇಂದ್ರ ಬಜೆಟ್: ಅನಿವಾಸಿ ಭಾರತೀಯರ ನಿರೀಕ್ಷೆ ಮತ್ತು ನಿರಾಸೆ

nirmala seetharaman
04/02/2025

ಈ ಬಾರಿಯ ಕೇಂದ್ರ ಬಜೆಟ್ ಅನಿವಾಸಿ ಭಾರತೀಯರಿಗೆ (NRI) ವಿಶೇಷ ಯೋಜನೆಗಳನ್ನೊ ಅಥವಾ ಪ್ರೋತ್ಸಾಹಕ ಘೋಷಣೆಗಳನ್ನೊ ಒದಗಿಸದೆ ನಿರಾಸೆ ಮೂಡಿಸಿದೆ. ಕಳೆದ ಕೆಲವು ವರ್ಷಗಳಿಂದ NRI ಸಮುದಾಯ ದೇಶದ ಆರ್ಥಿಕತೆಗೆ ನೀಡುತ್ತಿರುವ ಸಹಾಯವನ್ನು ಪರಿಗಣಿಸಿ, ಅವರಿಗಾಗಿ ಹೊಸ ಯೋಜನೆಗಳ ನಿರೀಕ್ಷೆ ಹೆಚ್ಚಿಸಿತ್ತು. ಆದರೆ, ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಸ್ಪಷ್ಟ ಘೋಷಣೆ ಇಲ್ಲದೆ, ಪರಿಸ್ಥಿತಿ ಶೂನ್ಯವಾಗಿದೆ ಎಂಬ ಅನುಭವ ಆಗುತ್ತಿದೆ.

ಅನಿವಾಸಿಗಳ ನಿರೀಕ್ಷೆಗಳು -– ಯಾವುವು ಈ ಬಾರಿ ಕೈಗೊಳ್ಳಲಾಗಲಿಲ್ಲ?

ನಿವೇಶನಕ್ಕೆ ತೆರಿಗೆ ಸಡಿಲಿಕೆ: ಅನಿವಾಸಿ ಭಾರತೀಯರು ಭಾರತದಲ್ಲಿ ಮನೆ, ಭೂಮಿ, ಅಥವಾ ವಾಣಿಜ್ಯ ಆಸ್ತಿಗಳಿಗೆ ಬಂಡವಾಳ ಹೂಡಿಕೆಗೆ ಹಿತಾಸಕ್ತರಾಗಿದ್ದಾರೆ. ಆದರೆ, ಈ ಬಾರಿಯ ಬಜೆಟ್ ನಲ್ಲಿ ಹಿತಕರ ತೆರಿಗೆ ನೀತಿ ಅಥವಾ ಪ್ರೋತ್ಸಾಹಕರ ಮಾಹಿತಿ ದೊರೆಯಲಿಲ್ಲ.

ಬ್ಯಾಂಕ್ ಠೇವಣಿ ಮತ್ತು ಹಣ ವರ್ಗಾವಣೆ ಸುಲಭೀಕರಣ:

ಅನಿವಾಸಿಗಳಿಂದ ಭಾರತಕ್ಕೆ ಬರುವ ಹಣವನ್ನು ಸುಲಭವಾಗಿ ನಿರ್ವಹಿಸಲು ಮತ್ತು ಬಡ್ಡಿದರ ಸೌಲಭ್ಯ ಹೆಚ್ಚಿಸಲು ನಿರೀಕ್ಷಿಸಲಾಗಿತ್ತು, ಆದರೆ ಯಾವುದೇ ಘೋಷಣೆಗಳು ಲಭ್ಯವಾಗಿಲ್ಲ.

ಅನಿವಾಸಿ ಹಿತಾಸಕ್ತಿ ಮತ್ತು ಪ್ರಗತಿ ಯೋಜನೆಗಳು:

ಅನಿವಾಸಿ ಭಾರತೀಯರು ತಮ್ಮ ತಂತ್ರಜ್ಞಾನ, ವ್ಯವಹಾರಿಕ ಕೌಶಲ್ಯ, ಮತ್ತು ಬಂಡವಾಳವನ್ನು ಭಾರತದಲ್ಲಿ ಬಳಸಲು ಅವಕಾಶ ನೀಡುವ ಹೊಸ ನೀತಿಗಳ ನಿರೀಕ್ಷೆ ಇತ್ತು. ಆದರೆ ಈ ಬಗ್ಗೆ ಸರ್ಕಾರದ ತೀರ್ಮಾನಗಳು ಸ್ಪಷ್ಟವಾಗಿಲ್ಲ.

ಪಾಸ್ಪೋರ್ಟ್, ವೀಸಾ, OCI ಕಾರ್ಡ್ ಸಮಸ್ಯೆಗಳ ಪರಿಹಾರ:

ಅನಿವಾಸಿಗಳು ಎದುರಿಸುತ್ತಿರುವ ಹಲವು ಕಾನೂನುಮಟ್ಟದ ಸಮಸ್ಯೆಗಳ ಕುರಿತು ಬಜೆಟ್ ನಲ್ಲಿ ಯಾವುದೇ ಸ್ಪಷ್ಟ ಪದ್ದತಿ ಪ್ರಕಟಗೊಂಡಿಲ್ಲ.

ಈ ಬಾರಿಯ ಬಜೆಟ್ ಅನಿವಾಸಿ ಭಾರತೀಯರ ಪ್ರಮುಖ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಾವು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುತ್ತಾರೆ, ಆದರೆ ಸರ್ಕಾರ ಅವರ ಬೇಡಿಕೆಗಳನ್ನು ಸೂಕ್ತವಾಗಿ ಪರಿಗಣಿಸದಿರುವುದು ನಿರಾಶೆಯನ್ನುಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಈ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡುವ ನಿರೀಕ್ಷೆ ಇದೆ ಎಂದು ಸಮಾಜ ಸೇವಕ ಅಬ್ದುಲ್ ಅಜೀಜ್ ಪವಿತ್ರ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

ಇತ್ತೀಚಿನ ಸುದ್ದಿ