ಆಸ್ತಿ ವಿಚಾರದಲ್ಲಿ ನಡೀತು ಗಲಾಟೆ: ಉದ್ಯಮಿಯನ್ನು 70 ಬಾರಿ ಇರಿದು ಕೊಂದ ಮೊಮ್ಮಗ! - Mahanayaka

ಆಸ್ತಿ ವಿಚಾರದಲ್ಲಿ ನಡೀತು ಗಲಾಟೆ: ಉದ್ಯಮಿಯನ್ನು 70 ಬಾರಿ ಇರಿದು ಕೊಂದ ಮೊಮ್ಮಗ!

10/02/2025

ಆಸ್ತಿ ಹಂಚಿಕೆ ವಿಚಾರವಾಗಿ ಹೈದರಾಬಾದ್ ಮೂಲದ ಉದ್ಯಮಿ ವೇಲಮತಿ ಚಂದ್ರಶೇಖರ ಜನಾರ್ದನ ರಾವ್ (86) ಅವರನ್ನು ಅವರ ಮೊಮ್ಮಗ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ.


Provided by

ತೀವ್ರ ವಾಗ್ವಾದದ ನಂತರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. 29 ವರ್ಷದ ಮೊಮ್ಮಗ ಕಿಲಾರು ಕೀರ್ತಿ ತೇಜಾ ಎಂಬಾತ ವೆಲ್ಜನ್ ಗ್ರೂಪ್ ನ ಅಧ್ಯಕ್ಷ ರಾವ್ ಅವರು ಅನ್ಯಾಯದ ಆಸ್ತಿ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಪಿತ್ರಾರ್ಜಿತ ಆಸ್ತಿಯಲ್ಲಿ ತೇಜಾ ಅವರಿಗೆ 4 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ವಿಚಾರದಲ್ಲಿ ಉಂಟಾದ ವಿವಾದ ಹಿಂಸೆಯ ರೂಪವನ್ನು ಪಡೆದಿದೆ. ಮೊಮ್ಮಗನೇ ತನ್ನ ಅಜ್ಜನನ್ನು 70 ಬಾರಿ ಇರಿದು ಕೊಂದಿದ್ದಾನೆ. ವಾಗ್ವಾದದ ಸಮಯದಲ್ಲಿ, ತೇಜಾ ಅವರ ತಾಯಿ ಸರೋಜಿನಿ ದೇವಿ ಮಧ್ಯಪ್ರವೇಶಿಸಲು ಪ್ರಯತ್ನಿಸಿ ಗಾಯಗೊಂಡಿದ್ದು ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.


Provided by

ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇತ್ತೀಚೆಗೆ ಹೈದರಾಬಾದ್ ಗೆ ಮರಳಿದ್ದ ತೇಜ, ತಾಯಿಯೊಂದಿಗೆ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾಗ ವಿವಾದ ಮತ್ತು ದಾಳಿ ನಡೆದಿದೆ.
ತೇಜಾ ಅವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಜನಾರ್ಧನ ರಾವ್ ಅವರು ಪ್ರಸಿದ್ಧ ಕೈಗಾರಿಕೋದ್ಯಮಿ. ಹಡಗು ನಿರ್ಮಾಣ, ಇಂಧನ ಮತ್ತು ಕೈಗಾರಿಕಾ ಅನ್ವಯಿಕೆಗಳು ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಕೊಡುಗೆಗಳನ್ನು ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ