ತಟ್ಟೆ-ಲೋಟ ಬಾರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ! - Mahanayaka
8:21 AM Saturday 21 - September 2024

ತಟ್ಟೆ-ಲೋಟ ಬಾರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ!

sarige noukara
12/04/2021

ಮೈಸೂರು: ರಾಜ್ಯ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದ್ದು, ಈ ನಡುವೆ ಇಂದು ನೌಕರರು ಹಾಗೂ ಮಹಿಳೆಯರು ತಟ್ಟೆ-ಲೋಟ ಬಾರಿಸಿ ಮೈಸೂರಿನ ಗಾಂಧಿ ವೃತ್ತದ ಬಳಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಕೆಗೆ ಮನವಿ ಮಾಡಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಕಳೆದ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದೆ. ನೀಡಿದ ಭರವಸೆ ಈಡೇರಿಸದೇ ವಂಚನೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು.

ಪ್ರತಿಭಟನೆ ನಿರತ ಯಾಸ್ಮಿನ್ ಬಾನು ಎಂಬವರು ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ 3 ತಿಂಗಳಿನಿಂದ ನನ್ನ ಪತಿಗೆ ಸಂಬಳವಾಗಿಲ್ಲ. ಸರ್ಕಾರ ಆಶ್ವಾಸನೆ ಕೊಟ್ಟಂತೆ ಬೇಡಿಕೆ ಈಡೇರಿಸಿಲ್ಲ ಎಂದು ನೋವು ತೋಡಿಕೊಂಡರು.


Provided by

ಮೆಕ್ಯಾನಿಕ್​ ಪರಶುರಾಮ್ ಮಾತನಾಡಿ, ರಾಜ್ಯ ಸರ್ಕಾರ 18 ಸಾವಿರ ಸಂಬಳ ನೀಡುತ್ತದೆ. ಹೀಗಾದರೆ ಸಂಸಾರ ಮಾಡುವುದು ಹೇಗೆ? ನಮ್ಮ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇತ್ತೀಚಿನ ಸುದ್ದಿ