ಕೇರಳದಲ್ಲಿ ಶೂಟಿಂಗ್ ವೇಳೆ ಆದ ಕೆಟ್ಟ ಅನುಭವ ಹಂಚಿಕೊಂಡ ಖ್ಯಾತ ನಟಿ
ಮಲಯಾಳಂ ಚಿತ್ರರಂಗ ಹೇಮಾ ಸಮಿತಿ ವರದಿಯಿಂದಾಗಿ ತಲ್ಲಣಗೊಂಡಿದೆ. ಈಗಾಗಲೇ ಮಲಯಾಳಂನ ಹಿರಿಯ ನಟರಾದ ಮುಖೇಶ್, ಸಿದ್ಧಿಕ್, ಜಯಸೂರ್ಯ ಇನ್ನಿತರರ ವಿರುದ್ಧ ದೂರು ದಾಖಲಾಗಿದೆ. ಹಿರಿಯ ನಿರ್ದೇಶಕರಾದ ರಂಜಿತ್, ವಿಕೆ ಪ್ರಕಾಶ್ ಇನ್ನಿತರರ ವಿರುದ್ಧವೂ ದೂರು ದಾಖಲಾಗಿದೆ. ಈ ನಡುವೆ ಖ್ಯಾತ ನಟ ಶರತ್ಕುಮಾರ್ ಪತ್ನಿ, ಮತ್ತು ಬಹುಜನಪ್ರಿಯ ನಟಿ ರಾಧಿಕಾ ಶರತ್ಕುಮಾರ್ ಅವರು ಕೇರಳದಲ್ಲಿ ತಮಗಾದ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಿನಿಮಾವೊಂದರ ಶೂಟಿಂಗ್ ಗಾಗಿ ನಾನು ಕೇರಳಕ್ಕೆ ಹೋಗಿದ್ದೆ. ನನಗೆ ಕ್ಯಾರವ್ಯಾನ್ ನೀಡಲಾಗಿತ್ತು. ನಾನು ಅದರಲ್ಲೇ ಸ್ನಾನ, ಶೌಚ, ಬಟ್ಟೆ ಬದಲಿಸಲು ಬಳಸುತ್ತಿದ್ದೆ. ಆದ್ರೆ ಒಂದು ದಿನ ಕ್ಯಾರವಾನ್ ನಿಂದ ಹೊರಗೆ ಬಂದಾಗ ಕೆಲವು ಯುವಕರು ಮೊಬೈಲ್ ನಲ್ಲಿ ಏನೋ ನೋಡುತ್ತಿರುವುದು ನನ್ನ ಗಮನಕ್ಕೆ ಬಂತು. ನನ್ನ ಅಸಿಸ್ಟೆಂಟ್ ಬಳಿ ಹೇಳಿ ಅವರು ಏನು ನೋಡುತ್ತಿದ್ದಾರೆ ಅಂತ ತಿಳಿದುಕೋ ಎಂದೆ. ಆ ಯುವಕರು ಕ್ಯಾರವ್ಯಾನ್ ನಲ್ಲಿ ಅಳವಡಿಸಿರುವ ಹಿಡನ್ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯ ನೋಡುತ್ತಿದ್ದರಂತೆ ಎಂದು ಅವರು ಹೇಳಿದ್ದಾರೆ.
ಇದಾದ ಬಳಿಕ ಕ್ಯಾರವ್ಯಾನ್ ಬಳಸುವುದನ್ನೇ ಬಿಟ್ಟ ಅವರು, ಎಷ್ಟು ಕಷ್ಟವಾದರೂ ಪರವಾಗಿಲ್ಲ ಅಂತ ಹೊಟೇಲ್ ರೂಮ್ ಬುಕ್ ಮಾಡುತ್ತಿದ್ದರಂತೆ.
ಕೇರಳ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ವ್ಯಾಪಕ ಆಕ್ರೋಶ ಕೂಡ ಕೇಳಿ ಬಂದಿದೆ. ದೇಶದ ಎಲ್ಲ ಚಿತ್ರರಂಗಗಳಲ್ಲೂ ಇಂತಹ ಸಮಸ್ಯೆಗಳಿವೆ. ಮಹಿಳಾ ಸುರಕ್ಷತೆ ಬಗ್ಗೆ ಹೇಮಾ ಸಮಿತಿಯಂತೆ ಎಲ್ಲ ಚಿತ್ರರಂಗದಲ್ಲೂ ಸಮಿತಿ ರಚನೆ ಮಾಡಿದರೆ ಇಂತಹ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರಬಹುದು ಅನ್ನೋ ಮಾತುಗಳು ಕೇಳಿ ಬಂದಿದೆ. ಅತ್ತ ತಮಿಳುನಾಡಿನಲ್ಲೂ ಹೇಮಾ ಸಮಿತಿಯಂತೆ ಸಮಿತಿ ಮಾಡಬೇಕು ಅನ್ನೋ ಚರ್ಚೆಗಳು ಸೃಷ್ಟಿಯಾಗಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: