ರಕ್ತ ಕೊಡ್ತೀವಿ, ನೀರು ಕೊಡಲ್ಲ ಎಂದು ಕೈಕೊಯ್ದುಕೊಂಡ ಹೋರಾಟಗಾರ! - Mahanayaka

ರಕ್ತ ಕೊಡ್ತೀವಿ, ನೀರು ಕೊಡಲ್ಲ ಎಂದು ಕೈಕೊಯ್ದುಕೊಂಡ ಹೋರಾಟಗಾರ!

chikkamagaluru protest
29/09/2023

ಚಿಕ್ಕಮಗಳೂರು: ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ ಪ್ರತಿಭಟನೆ ವೇಳೆ ಕನ್ನಡ ಪರ ಹೋರಾಟಗಾರರೊಬ್ಬರು ಕೈಕೊಯ್ದುಕೊಂಡ ಘಟನೆ ಕಳಸ ತಾಲೂಕಿನಲ್ಲಿ ನಡೆದಿದೆ.


Provided by

ಕನ್ನಡ ಪರ ಹೋರಾಟಗಾರರಾದ ಕನ್ನಡ ರಾಜು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆಯೇ, ರಕ್ತ ಕೊಡ್ತೀವಿ, ನೀರು ಕೊಡಲ್ಲ ಎಂದು ಕೈ ಕೊಯ್ದುಕೊಂಡಿದ್ದಾರೆ. ಏಕಾಏಕಿ ನಡೆದ ಘಟನೆಯಿಂದ ಆತಂಕಕ್ಕೊಳಗಾದ ಇತರ ಹೋರಾಟಗಾರರು ತಕ್ಷಣವೇ ಅವರನ್ನು ತಡೆದಿದ್ದಾರೆ.

ರೈತ ಸಂಘ, ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ  ಈ ಘಟನೆ ನಡೆದಿದೆ.


Provided by

ಇತ್ತೀಚಿನ ಸುದ್ದಿ