ಅಧಿಕಾರಿಗಳನ್ನು ಗದರಿಸಿ, ಸಭೆ ಅರ್ಧಕ್ಕೆ ಮೊಟಕುಗೊಳಿಸಿ ಸಿಎಂ ವಾಪಾಸಾಗಿದ್ದಾರೆ: ಶಾಸಕ ಯಶ್ಪಾಲ್ ಸುವರ್ಣ - Mahanayaka

ಅಧಿಕಾರಿಗಳನ್ನು ಗದರಿಸಿ, ಸಭೆ ಅರ್ಧಕ್ಕೆ ಮೊಟಕುಗೊಳಿಸಿ ಸಿಎಂ ವಾಪಾಸಾಗಿದ್ದಾರೆ: ಶಾಸಕ ಯಶ್ಪಾಲ್ ಸುವರ್ಣ

yashpal
02/08/2023

ಉಡುಪಿ: ಕರಾವಳಿಯ ಅಭಿವೃದ್ಧಿಯ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡದೇ, ಅಧಿಕಾರಿಗಳಿಗೆ ಗದರಿಸಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಿಎಂ ಸಿದ್ದರಾಮಯ್ಯನವರು ವಾಪಾಸಾಗಿದ್ದಾರೆ. ಸಿಎಂ ಉದ್ದೇಶಪೂರ್ವಕವಾಗಿ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂದು ಶಾಸಕ ಯಶ್ಪಾಲ್ ಸುವರ್ಣ ಖಂಡಿಸಿದ್ದಾರೆ.


Provided by

ಅವರು ಬುಧವಾರ, ಉಡುಪಿಯಲ್ಲಿ ಮುಖ್ಯಮಂತ್ರಿಗಳ ಭೇಟಿಯ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕಡಲ್ಕೊರೆತ, ವಿಡಿಯೋ ಪ್ರಕರಣಗಳ ಕುರಿತಾಗಿ ಚರ್ಚೆ ಮಾಡಲೆಂದು ಜಿಲ್ಲೆಯ ಐದು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದೆವು. ಆದರೆ ಬಿಜೆಪಿ ಐದು ಶಾಸಕರು ಎಂಬ ಕಾರಣಕ್ಕೆ ಅಭಿವೃದ್ಧಿಯ ಬಗ್ಗೆ ಚರ್ಚಿಸದೇ, ನಮಗೂ ಚರ್ಚೆಗೆ ಅವಕಾಶ ನೀಡದೇ ತೆರಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರಕಾರ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಬಂಧಿತರಾದ ಉಗ್ರಗಾಮಿಗಳನ್ನು, ಉಗ್ರರೆಂದು ಹೇಳಲು ಸಾಧ್ಯವಿಲ್ಲ ಎಂದು ಗೃಹಮಂತ್ರಿಗಳು ತಿಳಿಸಿದ್ದರು. ಅಲ್ಲದೇ ಕುಕ್ಕರ್ ಬ್ಲಾಸ್ಟ್ ಸಂದರ್ಭದಲ್ಲಿಯೂ ಇದೇ ರೀತಿಯ ನಿಲುವನ್ನು ಕಾಂಗ್ರೆಸ್ ತಾಳಿತ್ತು. ಈಗ ವಿಡಿಯೋ ಪ್ರಕರಣದಲ್ಲಿಯೂ ಎಲ್ಲಿ ಮುಸ್ಲಿಂರ ಮತಗಳು ಕೈ ತಪ್ಪುತ್ತವೆ ಎಂಬ ಕಾರಣಕ್ಕೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ