ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಏರ್ಪಡಿಸಿದ್ದ ರ್ಯಾಲಿಯಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆ
ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಲೋಕಸಭಾ ಅಭ್ಯರ್ಥಿಯ ಪರವಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಏರ್ಪಡಿಸಿದ್ದ ರ್ಯಾಲಿಯ ಉದ್ದಕ್ಕೂ ಅಲ್ಲಾಹು ಅಕ್ಬರ್ ಎಂಬ ಘೋಷಣೆ ಮೊಳಗಿದ್ದು ಬಿಜೆಪಿಗೆ ಇರಿಸು ಮುರಿಸು ಉಂಟಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಸೀತಾಯಿ ದಿನತ್ ಅಸೆಂಬ್ಲಿ ಕ್ಷೇತ್ರಗಳ ಮುಸ್ಲಿಮರು ಈ ರ್ಯಾಲಿಯನ್ನು ಸಂಘಟಿಸಿರುವುದಾಗಿ ಬಿಜೆಪಿ ಕೂಚ್ ಬಿಹಾರ್ ಅಧ್ಯಕ್ಷ ಮತ್ತು ಶಾಸಕರೂ ಆಗಿರುವ ಸುಕುಮಾರ್ ರಾಯ್ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಸಿಲಿಗುರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರ್ಯಾಲಿ ನಡೆಸಿದ್ದರು. ಈ ರ್ಯಾಲಿಯಲ್ಲಿ ಕೂಚ್ ಬಿಹಾರ್ ಜಿಲ್ಲೆಯ ಸುಪ್ತಾಬಾರಿ ಪ್ರದೇಶದ ರಾಜ್ ಬನ್ಸಿ ಮುಸ್ಲಿಂಗಳ ಪೈಕಿ ದೊಡ್ಡದೊಂದು ಗುಂಪು ಭಾಗವಹಿಸಿತ್ತು. ಈ ಮುಸ್ಲಿಮರನ್ನು ಸಂಘಟಿಸಿ ರ್ಯಾಲಿಯನ್ನು ನಡೆಸಲಾಗಿತ್ತು ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth