ಶಾಲೆ ನಿರ್ಮಾಣಕ್ಕಾಗಿ ತೆಗೆದಿಟ್ಟಿದ್ದ ಇಂಗು ಗುಂಡಿಗೆ ಬಿದ್ದು 8 ವರ್ಷದ ಬಾಲಕ ದುರ್ಮರಣ - Mahanayaka
1:15 PM Saturday 21 - September 2024

ಶಾಲೆ ನಿರ್ಮಾಣಕ್ಕಾಗಿ ತೆಗೆದಿಟ್ಟಿದ್ದ ಇಂಗು ಗುಂಡಿಗೆ ಬಿದ್ದು 8 ವರ್ಷದ ಬಾಲಕ ದುರ್ಮರಣ

chikkamagaluru
06/08/2023

ಚಿಕ್ಕಮಗಳೂರು: ಶಾಲೆ ನಿರ್ಮಾಣಕ್ಕಾಗಿ ಮಳೆ ನೀರು ಇಂಗಿಸಲು ಮಾಡಿಟ್ಟಿದ್ದ ಗುಂಡಿಗೆ ಬಿದ್ದ 8 ವರ್ಷದ ಬಾಲಕನೋರ್ವ ಸಾವನ್ನಪ್ಪಿದ ದಾರುಣ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದಲ್ಲಿ  ನಡೆದಿದೆ.

ಅಶರ್ ಡಿ ಗುನ್ನಾ (8) ಮೃತಪಟ್ಟ ಬಾಲಕನಾಗಿದ್ದಾನೆ. ಹೊಸದಾಗಿ ನಿರ್ಮಾಣವಾಗುತ್ತಿದ್ದ ಮೊರಾರ್ಜಿ ದೇಸಾಯಿ ಶಾಲೆಯ ಕಾಮಗಾರಿಗಾಗಿ ಮಳೆ ನೀರನ್ನು ಇಂಗಿಸಲು ಗುತ್ತಿಗೆದಾರರು ಗುಂಡಿ ತೆಗೆದಿದ್ದರು. ಈ ಗುಂಡಿಗೆ ಬಿದ್ದ ಬಾಲಕ ಸಾವನ್ನಪ್ಪಿದ್ದಾನೆ.

ಶಾಲೆ ಕಟ್ಟಲು ಟ್ಯಾಂಕ್ ಅಥವ ಅಂಡರ್ ಗ್ರೌಂಡ್ ಟ್ಯಾಂಕ್ ನಿರ್ಮಾಣ ಮಾಡಬೇಕು, ಆದರೆ ಫೀಲ್ಡ್ ಪಕ್ಕದಲ್ಲೇ ಇಂಗು ಗುಂಡಿ ನಿರ್ಮಾಣ ಮಾಡಿದ್ದರಿಂದ  ಈ ಅವಘಡ ಸಂಭವಿಸಿದೆ. ಗುತ್ತಿಗೆದಾರರೇ ಈ ಘಟನೆಗೆ ನೇರಕಾರಣವಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ