ಹಾಸ್ಯಕರ ಘಟನೆ: ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಭವಿಷ್ಯ ನುಡಿದ ಗುರೂಜಿ! - Mahanayaka

ಹಾಸ್ಯಕರ ಘಟನೆ: ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಭವಿಷ್ಯ ನುಡಿದ ಗುರೂಜಿ!

gangavalli
29/07/2024

ಕಾರವಾರ: ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ದುರಂತದಲ್ಲಿ 8 ಮಂದಿಯ ಮೃತದೇಹ ಪತ್ತೆಯಾಗಿದೆ. ಕೇರಳ ಮೂಲದ ಲಾರಿ ಚಾಲಕ ಸೇರಿದಂತೆ ಹಲವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಈ ನಡುವೆ ಕಾರವಾರದಲ್ಲಿ ಹಾಸ್ಯಕರ ಘಟನೆಯೊಂದು ನಡೆದಿದ್ದು, ಸ್ಥಳಕ್ಕೆ ಸ್ವಾಮೀಜಿಯೊಬ್ಬರು ಆಗಮಿಸಿ ಭವಿಷ್ಯ ನುಡಿದ ಘಟನೆ ನಡೆದಿದೆ.

ಉಡುಪಿಯ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ ಸ್ಥಳಕ್ಕೆ ಆಗಮಿಸಿ ಭವಿಷ್ಯ ನುಡಿದಿದ್ದು, ಎಲೆಕ್ಟ್ರಾನಿಕ್ ಸ್ಕ್ಯಾನರ್ ವೊಂದನ್ನು ಹಿಡಿದುಕೊಂಡು,  ಗಂಗಾವಳಿ ನದಿಯ 24 ಅಡಿ ಆಳದಲ್ಲಿ ಲಾರಿ ಇದೆ. ಲಾರಿ ಇರುವ ಜಾಗದಲ್ಲಿ ಒಂದು ಮೃತದೇಹ ಕೂಡ ಇದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

17 ಮೃತದೇಹ ಇವೆ. ಸದ್ಯ 8 ಮೃತದೇಹಗಳು ಪತ್ತೆ, ಇನ್ನೂ 9 ಶವಗಳು ಪತ್ತೆ ಆಗಬೇಕಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಮೂವರ ಮೃತದೇಹಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿದೆ. ಸ್ಥಳಕ್ಕೆ ಸೇನೆಯೇ ಆಗಮಿಸಿ 3 ಪಾಯಿಂಟ್ ಗಳಲ್ಲಿ ಟ್ರಕ್ ಇರುವ ಸಾಧ್ಯತೆಗಳನ್ನು ಗುರುತಿಸಿದೆ. ಸಾಕಷ್ಟು ಎಕ್ಸ್ ಫರ್ಟ್ ಗಳು ಆಗಮಿಸಿದ್ದರೂ, ಇನ್ನೂ ಟ್ರಕ್ ಗುರುತಿಸಲು ಸಾಧ್ಯವಾಗಿಲ್ಲ. ಈಶ್ವರ್ ಮಲ್ಪೆಯಂತಹ ಎಕ್ಸ್ ಫರ್ಟ್ ಗಳು ನದಿಯ ಆಳಕ್ಕೆ ಇಳಿದು ಸಾಕಷ್ಟು ಹುಡುಕಾಟವನ್ನು ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಇದೇ ಸಂದರ್ಭದಲ್ಲಿ ಗುರೂಜಿಯೊಬ್ಬರು ನದಿ ದಡದಲ್ಲಿ ನಿಂತು ತಮಗೆ ತೋಚಿದಂತೆ ನೀಡಿರುವ ಹೇಳಿಕೆ ಹಾಸ್ಯಕರ ಸನ್ನಿವೇಶವನ್ನು ಸೃಷ್ಠಿಸಿದೆ.

ಟ್ರಕ್ ಇರುವ ಜಾಗದ ಬಳಿ ಒಂದು ಮೃತದೇಹ ಇದೆ. ಇನ್ನುಳಿದವರ ಮೃತದೇಹ ನದಿಯಲ್ಲಿ ಕೊಚ್ಚಿಹೋಗಿವೆ ಎಂದು ಸ್ವಾಮೀಜಿ ಹೇಳಿರುವುದಾಗಿ ವರದಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ