ಬದುಕಿದ್ದ ವ್ಯಕ್ತಿಗೆ ಕರೆ ಮಾಡಿ, “ನಿಮ್ಮ ಮರಣ ಸರ್ಟಿಫಿಕೆಟ್ ರೆಡಿ ಇದೆ, ತಗೊಂಡು ಹೋಗಿ” ಎಂದ ಅಧಿಕಾರಿಗಳು
03/07/2021
ಥಾಣೆ: ಬದುಕಿದ್ದ ವ್ಯಕ್ತಿಗೆ ಕರೆ ಮಾಡಿ, ನಿಮ್ಮ ಮರಣ ಪತ್ರ ತೆಗೆದುಕೊಂಡು ಹೋಗಿ ಎಂದು ಅಧಿಕಾರಿಗಳು ಹೇಳಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಥಾಣೆ ಮುನ್ಸಿಪಾಲ್ ಕಾರ್ಪೋರೇಷನ್ ಅವರು ಕರೆ ಮಾಡಿ ‘ನಿಮ್ಮ ಮರಣ ಪ್ರಮಾಣ ಪತ್ರ ಕಚೇರಿಗೆ ಬಂದಿದೆ’ ಎಂದು ಹೇಳಿದ್ರು ಎಂದು ಚಂದ್ರಶೇಖರ್ ದೇಸಾಯಿ ಎಂಬವರು ಆರೋಪ ಮಾಡಿದ್ದಾರೆ.
ಇನ್ನೂ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿದ ಉಪ ಕಮಿಷನರ್ ಸಂದೀಪ್ ಮಾಲ್ವಿ ಇದೊಂದು ತಾಂತ್ರಿಕ ದೋಷವಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಮಗೆ ಈ ಲಿಸ್ಟ್ ಪುಣೆ ಕಚೇರಿಯಿಂದ ಬಂದಿತ್ತು. ತಾಂತ್ರಿಕ ದೋಷದಿಂದಾಗಿ ಈ ವ್ಯಕ್ತಿಯ ಹೆಸರು ಕೂಡ ಮೃತರ ಪಟ್ಟಿಯಲ್ಲಿ ಸೇರಿಕೊಂಡಿದೆ. ತಾಂತ್ರಿಕ ದೋಷವನ್ನು ತಕ್ಷಣವೇ ಸರಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.