ಮಾವಿನ ಹಣ್ಣನ್ನು ಚಪ್ಪರಿಸಿ ತಿನ್ನುವ ಮೊದಲು ಎಚ್ಚರ ಇರಲಿ!

mango
23/04/2024

ಮಾವಿನ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು, ಇದರಲ್ಲಿ ವಿಟಮಿನ್ ಎ ಮತ್ತು ಸಿ ಯಂತಹ ಅಗತ್ಯವಾದ ಪೋಷಕಾಂಶ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿ, ದೃಷ್ಟಿ, ಆರೋಗ್ಯ ಮತ್ತು ಚರ್ಮದ ಸಮಗ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಇದರಲ್ಲಿ ಫೈಬರ್ ಅಂಶ ಸಹ ಹೆಚ್ಚಿದೆ. ಜೀರ್ಣಕ್ರಿಯೆ ಹಾಗೂ ತೂಕ ನಿರ್ವಹಣೆಗೂ ಸಹಕಾರಿಯಾಗಿದೆ.

ಮಾವಿನಹಣ್ಣುಗಳು ಬೀಟಾ-ಕ್ಯಾರೋಟಿನ್ ಮತ್ತು ಫ್ಲೇವನಾಯ್ಡ್ ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಹೃದ್ರೋಗ ಮತ್ತು ಕ್ಯಾನ್ಸರ್ ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

ಮಾವಿನಹಣ್ಣುಗಳು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಕೆ ಪೋಷಕಾಂಶಗಳನ್ನು ಹೊಂದಿದೆ. ಹೃದಯದ ಆರೋಗ್ಯ, ಮೂಳೆ ಬಲಗೊಳ್ಳಲು ಮುಂತಾದವುಗಳಿಗೆ ಸಹಕಾರಿ. ಮಾವಿನಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುವುದಲ್ಲದೆ, ಮಲಬದ್ಧತೆ ಮತ್ತು ಜೀರ್ಣಕಾರಿ ಅಸ್ವಸ್ಥತೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಇಷ್ಟೆಲ್ಲ ಆರೋಗ್ಯದ ಪ್ರಯೋಜನವಿರುವ ಮಾವಿನ ಹಣ್ಣಿನ ಸೇವನೆಗೂ ಮುನ್ನ, ಕಾಳಜಿ ವಹಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಮಾವಿನ ಹಣ್ಣನ್ನು ಸೇವಿಸುವುದಕ್ಕೂ ಮೊದಲು ನೀರಿನಲ್ಲಿ ನೆನೆಸಿಡಬೇಕಂತೆ. ಇದು ಮಾವಿನ ಹಣ್ಣನ್ನು ಸೇವನೆ ಮಾಡುವ ಸರಿಯಾದ ವಿಧಾನವಾಗಿದೆ. ಮಾವಿನ ಹಣ್ಣು ಸೇವನೆಗೂ ಮೊದಲು ನೀರಿನಲ್ಲಿ ನೆನೆಸಿಡುವುದರಿಂದ ಯಾವೆಲ್ಲ ಪ್ರಯೋಜನಗಳಿಗೆ ಎನ್ನುವುದನ್ನು ತಿಳಿದುಕೊಳ್ಳೋಣ…

ಮಾವಿನಹಣ್ಣನ್ನು ಏಕೆ ನೆನೆಸಬೇಕು?:

ಮಾವಿನಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡುವುದು ಆರೋಗ್ಯಕ್ಕೆ ಒಳ್ಳೆಯದು. ಮಾವಿನಹಣ್ಣಿನಲ್ಲಿರುವ ಫೈಟಿಕ್ ಆಮ್ಲದಿಂದಾಗಿ, ಇದು ದೇಹದಲ್ಲಿನ ಸತು, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳನ್ನು ಹೀರಿಕೊಳ್ಳುವ ನೈಸರ್ಗಿಕ ಪ್ರಕ್ರಿಯೆಯನ್ನು ತಡೆಯುತ್ತದೆ. ಮಲಬದ್ಧತೆ, ತಲೆನೋವು ಮುಂತಾದ ಸಮಸ್ಯೆಗಳಿಗೂ ಕಾರಣವಾಗಬಹುದು.

ಶುಚಿಗೊಳಿಸುವುದು ಅಗತ್ಯ:

ಮಾವನ್ನು ನೀರಿನಲ್ಲಿ ನೆನೆಸುವುದರಿಂದ ಹಣ್ಣಿನ ಮೇಲೆ ಇರುವ ಯಾವುದೇ ಮೇಲ್ಮೈ ಕೊಳಕು ಅಥವಾ ಕೀಟನಾಶಕಗಳ ಅವಶೇಷಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಾವಿನಹಣ್ಣುಗಳ ಸಂಗ್ರಹಣೆ ಅಥವಾ ಸಾಗಣೆಯ ಸಮಯದಲ್ಲಿ ಮಾಲಿನ್ಯಕಾರಕಗಳು ಸೇರಿಕೊಂಡಿರಬಹುದು. ಹೀಗಾಗಿ ಮಾವಿನ ಹಣ್ಣುಗಳನ್ನು ನೀರಿನಲ್ಲಿ ನೆನೆಸಿಟ್ಟು ಉಜ್ಜಿ ತೊಳೆದು ಬಳಿಕ ತಿನ್ನುವುದು ಉತ್ತಮ.

ಮೃದುವಾಗಿಸುವುದು:

ಮಾವಿನಹಣ್ಣನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡುವುದರಿಂದ ಹಣ್ಣಿನ ಸಿಪ್ಪೆಯು ಮೃದುಗೊಳ್ಳುತ್ತದೆ. ಇದರಿಂದ ಮಾವಿನಹಣ್ಣಿನ ಸಿಪ್ಪೆ ತೆಗೆಯಲು ಅಥವಾ ಕತ್ತರಿಸಲು ಸುಲಭವಾಗುತ್ತದೆ. ನಿಮಗೆ ಮಾವಿನ ಸಿಪ್ಪೆ ತೆಗೆಯುವುದು ಕಠಿಣ ಎನಿಸಿದರೆ ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿ ನೋಡಿ.

ಒಟ್ಟಾರೆಯಾಗಿ, ತಿನ್ನುವ ಮುನ್ನ ಮಾವಿನಹಣ್ಣುಗಳನ್ನು ನೀರಿನಲ್ಲಿ ನೆನೆಸುವುದು ಹೆಚ್ಚಿನ ಸಂದರ್ಭಗಳಲ್ಲಿ ಅಗತ್ಯವಿಲ್ಲ. ಯಾಕೆಂದರೆ ಕೆಲವರ ಮನೆಗಳಲ್ಲಿ ಮಾವಿನಹಣ್ಣಿನ ಮರಗಳಿರುತ್ತವೆ. ಇದಕ್ಕೆ ಯಾವುದೇ ರಾಸಾಯನಿಕ ಸಿಂಪಡಿಸಿರುವುದಿಲ್ಲ. ಹೀಗಾಗಿ ಇವುಗಳನ್ನು ನೀರಿನಲ್ಲಿ ನೆನೆಸಿಡಬೇಕೆಂದಿಲ್ಲ. ಆದರೆ, ಕೀಟನಾಶಕ ಸಿಂಪಡಿಸಿರುವ ಅದರಲ್ಲೂ ನೀವು ಮಾರ್ಕೆಟ್‌ನಲ್ಲಿ ಖರೀದಿ ಮಾಡಿ ತಂದ ಮಾವನ್ನು ತೊಳೆಯುವುದು ಬಹಳ ಮುಖ್ಯವಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version