ಬಲಾಢ್ಯ ಪ್ರದರ್ಶಿಸಿದ ಆರು ರಾಜ್ಯಗಳ ಉಪಚುನಾವಣೆ: ವಿರೋಧ ಪಕ್ಷಗಳ ಒಕ್ಕೂಟಕ್ಕೆ ಜನಬೆಂಬಲ; ಬಿಜೆಪಿಗೆ ತಲೆಬಿಸಿ - Mahanayaka
3:08 AM Friday 20 - September 2024

ಬಲಾಢ್ಯ ಪ್ರದರ್ಶಿಸಿದ ಆರು ರಾಜ್ಯಗಳ ಉಪಚುನಾವಣೆ: ವಿರೋಧ ಪಕ್ಷಗಳ ಒಕ್ಕೂಟಕ್ಕೆ ಜನಬೆಂಬಲ; ಬಿಜೆಪಿಗೆ ತಲೆಬಿಸಿ

09/09/2023

INDIA ಎಂಬ ವಿರೋಧ ಪಕ್ಷಗಳ ಮೈತ್ರಿಕೂಟ ರಚನೆಯಾದ ಬಳಿಕ ಮೊದಲ ಬಾರಿಗೆ ಆರು ರಾಜ್ಯಗಳಾದ್ಯಂತ ಏಳು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ಸದಸ್ಯರು ನಾಲ್ಕು, ಬಿಜೆಪಿ 3 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.

ಉತ್ತರ ಪ್ರದೇಶದ ಘೋಸಿಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಸುಲಭವಾಗಿ ಭಾರೀ ಅಂತರದಿಂದ ಗೆಲುವು ದಾಖಲಿಸಿದೆ. ಇಲ್ಲಿ ಸುಧಾಕರ್ ಸಿಂಗ್ ಬರೋಬ್ಬರಿ 43 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ತ್ರಿಪುರಾದ ಧನ್‌ಪುರ ಮತ್ತು ಬೋಕ್ಸಾನಗರದಲ್ಲಿ ಸಿಪಿಐ(ಎಂ) ಅನ್ನು ಸೋಲಿಸಿ ಬಿಜೆಪಿ ಎರಡು ವಿಧಾನಸಭಾ ಸ್ಥಾನಗಳನ್ನು ಗೆದ್ದಿದ್ದು, ಉತ್ತರಾಖಂಡದ ಬಾಗೇಶ್ವರ ವಿಧಾನಸಭಾ ಕ್ಷೇತ್ರವನ್ನೂ ಉಳಿಸಿಕೊಂಡಿದೆ. ತ್ರಿಪುರಾದ ಬೊಕ್ಸಾನಗರ್ ಮತ್ತು ಧನ್‌ಪುರ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾದ ತಫಜ್ಜಲ್ ಹೊಸೈನ್ ಮತ್ತು ಬಿಂದು ದೇಬನಾಥ್ ಅವರು ಕ್ರಮವಾಗಿ 30,237 ಮತ್ತು 18,871 ಮತಗಳ ಅಂತರದಿಂದ ಜಯಗಳಿಸಿದರು.


Provided by

ಉತ್ತರಾಖಂಡದ ಬಾಗೇಶ್ವರ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಇಲ್ಲಿನ ಅಭ್ಯರ್ಥಿ ಪಾರ್ವತಿ ದಾಸ್ ಅವರು ಕಾಂಗ್ರೆಸ್ ಅಭ್ಯರ್ಥಿ ಬಸಂತ್ ಕುಮಾರ್ ಅವರನ್ನು 2400 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.
ಕೇರಳದ ಪುತ್ತುಪ್ಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚಾಂಡಿ ಉಮ್ಮನ್ ಅವರು 36,000 ಮತಗಳ ಅಂತರದಿಂದ ಸಿಪಿಐ(ಎಂ) ಅಭ್ಯರ್ಥಿ ಜೈಕ್ ಸಿ ಥಾಮಸ್ ಅವರನ್ನು ಸೋಲಿಸಿದರು.

ಜಾರ್ಖಂಡ್ ಮುಕ್ತಿ ಮೋರ್ಚಾ ಅಭ್ಯರ್ಥಿ ಬೇಬಿ ದೇವಿ ಡುಮ್ರಿ ಉಪಚುನಾವಣೆಯಲ್ಲಿ 17,000 ಮತಗಳ ಅಂತರದಿಂದ ಎಜೆಎಸ್‌ಯು ಪಕ್ಷದ ಯಶೋದಾ ದೇವಿ ಅವರನ್ನು ಸೋಲಿಸಿದರು.

ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ನಿರ್ಮಲ್ ಚಂದ್ರ ರಾಯ್ ಅವರು ಪಶ್ಚಿಮ ಬಂಗಾಳದ ಧುಪ್ಗುರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿಯ ತಪಸಾ ರಾಯ್ ಅವರನ್ನು 4300 ಮತಗಳಿಂದ ಸೋಲಿಸಿದರು.

ವರ್ಷಾಂತ್ಯದಲ್ಲಿ ನಡೆಯಲಿರುವ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಗಳು ಮತ್ತು 2024ರಲ್ಲಿ ನಡೆಯಲಿರುವ ನಿರ್ಣಾಯಕ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ (ಇಂಡಿಯಾ) ಬಣಕ್ಕೆ ಉಪಚುನಾವಣೆ ಫಲಿತಾಂಶಗಳು ಅಗ್ನಿಪರೀಕ್ಷೆಯಾಗಿದೆ.

ಇತ್ತೀಚಿನ ಸುದ್ದಿ