ಆಸ್ತಿ ವಿವಾದ: ಚಿಕ್ಕಪ್ಪನ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ ವ್ಯಕ್ತಿ

20/01/2025

ತಮಿಳುನಾಡಿನ ನಾಮಕ್ಕಲ್ ಎಂಬಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ದಾಳಿಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

ಕಥಿರನಲ್ಲೂರ್ ನಿವಾಸಿ ಗೋಪಾಲ್ ತನ್ನ ಸಹೋದರನ ಮಗ ಕುಮಾರವೇಲ್ ಅವರೊಂದಿಗೆ ಆಸ್ತಿಗಾಗಿ ಜಗಳವಾಡಿದ್ದರು. ಗೋಪಾಲ್ ಬೈಕ್ ನೊಂದಿಗೆ ಮನೆಯಿಂದ ಹೊರಟಾಗ, ಕುಮಾರವೇಲ್ ಅವರನ್ನು ಮಧ್ಯದಲ್ಲಿ ತಡೆದು ಆಸ್ತಿಯ ಬಗ್ಗೆ ವಾದ ಮಾಡಿದ್ದಾನೆ.
ಗೋಪಾಲ್ ಪ್ರತಿಕ್ರಿಯಿಸುವ ಮೊದಲೇ, ಕುಮಾರವೇಲ್ ಕುಡಗೋಲನ್ನು ಹೊರತೆಗೆದು ಪದೇ ಪದೇ ಹೊಡೆಯಲು ಪ್ರಾರಂಭಿಸಿದ್ದಾನೆ. ಆಗ ಮಹಿಳೆಯೊಬ್ಬಳು ಮಧ್ಯಪ್ರವೇಶಿಸಿ ಅವನನ್ನು ತಡೆಯಲು ಪ್ರಯತ್ನಿಸಿದ್ದಾಳೆ.

ನಂತರ ಸ್ಥಳೀಯರು ಈ ದಾಳಿಯನ್ನು ನಿಲ್ಲಿಸಿದ್ದಾರೆ. ಕುಮಾರವೇಲ್ ಕುಡಗೋಲಿನ ಮೊಂಡು ತುದಿಯಿಂದ ಹಲ್ಲೆ ನಡೆಸಿದ್ದರಿಂದ ಗೋಪಾಲ್ ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಕ್ಲಿಪ್ ತೋರಿಸುತ್ತದೆ.
ಗೋಪಾಲ್ ಅವರನ್ನು ರಾಸಿಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಮಾರವೇಲ್ ಅವರನ್ನು ಪುದುಚಥಿರಂ ಪೊಲೀಸರು ಬಂಧಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version