ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ: ಶಾಲಾ ಮಾಲೀಕನನ್ನು ಬಂಧಿಸಿದ ಸಿಬಿಐ
![](https://www.mahanayaka.in/wp-content/uploads/2024/06/e831f8b298b646517471a921191aae2439f35a83ec1197e6c135272d90032785.0.jpg)
ನೀಟ್-ಯುಜಿ ಪರೀಕ್ಷೆಯ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಗುಜರಾತ್ ನ ಗೋಧ್ರಾದಲ್ಲಿನ ಖಾಸಗಿ ಶಾಲೆಯ ಮಾಲೀಕನನ್ನು ಕೇಂದ್ರ ತನಿಖಾ ದಳ (ಸಿಬಿಐ) ಭಾನುವಾರ ಬಂಧಿಸಿದೆ. ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ರಾಕೇಶ್ ಠಾಕೂರ್, “ಪರೀಕ್ಷೆ ನಡೆದ ಪಂಚಮಹಲ್ ಜಿಲ್ಲೆಯ ಗೋಧ್ರಾದ ಜಯ್ ಜಲರಾಮ್ ಶಾಲೆಯ ಮಾಲೀಕ ದೀಕ್ಷಿತ್ ಪಟೇಲ್ ಅವರನ್ನು ಅವರ ನಿವಾಸದಿಂದ ಮುಂಜಾನೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಿಬಿಐ ಪ್ರಸ್ತುತ ಪಟೇಲ್ ಅವರನ್ನು ರಿಮಾಂಡ್ ಪಡೆಯಲು ಅಹಮದಾಬಾದ್ ಗೆ ಕರೆದೊಯ್ಯುತ್ತಿದೆ” ಎಂದಿದೆ.
ಗುಜರಾತ್ ಸರ್ಕಾರವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿರುವುದರಿಂದ ಸಿಬಿಐ ತಂಡವು ಅವರನ್ನು (ದೀಕ್ಷಿತ್ ಪಟೇಲ್) ಅಹಮದಾಬಾದ್ ನ ನಿಯೋಜಿತ ನ್ಯಾಯಾಲಯಕ್ಕೆ ಹಾಜರುಪಡಿಸುತ್ತದೆ” ಎಂದು ಠಾಕೂರ್ ವಿವರಿಸಿದರು. ಮೇ 5 ರಂದು ನೀಟ್-ಯುಜಿ ಪರೀಕ್ಷೆಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಜಯ್ ಜಲರಾಮ್ ಶಾಲೆಯೂ ಒಂದು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡಲು ಆರೋಪಿಗಳು ಆಕಾಂಕ್ಷಿಗಳಿಂದ ೧೦ ಲಕ್ಷ ರೂ.ಗಳನ್ನು ಕೋರಿದ್ದಾರೆ ಎಂದು ವರದಿಯಾದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರನೇ ವ್ಯಕ್ತಿ ಪಟೇಲ್.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth