ಸಿಎಂ ಮನೆಯಲ್ಲಿಯೇ ಹಾವು-ಚೇಳು ಇವೆ | ಯಡಿಯೂರಪ್ಪ ಆ್ಯಂಡ್ ಸನ್ ವಿರುದ್ಧ ಯತ್ನಾಳ್ ಮತ್ತೆ ಹೇಳಿಕೆ - Mahanayaka
10:11 AM Friday 20 - September 2024

ಸಿಎಂ ಮನೆಯಲ್ಲಿಯೇ ಹಾವು-ಚೇಳು ಇವೆ | ಯಡಿಯೂರಪ್ಪ ಆ್ಯಂಡ್ ಸನ್ ವಿರುದ್ಧ ಯತ್ನಾಳ್ ಮತ್ತೆ ಹೇಳಿಕೆ

15/02/2021

ವಿಜಯಪುರ: ಸಿಎಂ ಮನೆಯಲ್ಲಿಯೇ ಹಾವು-ಚೇಳುಗಳಿ ಇವೆ ಎಂದು  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.

ನಮ್ಮ ತಂದೆ ಹಾವು-ಚೇಳುಗಳ ಜೊತೆ ಕೆಲಸ ಮಾಡುತ್ತಿದ್ದಾರೆ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಿಕ್ರಿಯಿಸಿದ ಯತ್ನಾಳ್ ಹಾವು-ಚೇಳುಗಳು,  ಸಿಎಂ ಮನೆಯಲ್ಲಿಯೇ ಇವೆ ಎಂದು ತಿರುಗೇಟು ನೀಡಿದ್ದಾರೆ.

ಹಾವು-ಚೇಳುಗಳು ವಿಜಯೇಂದ್ರ ಹಾಗೂ ಕುಟುಂಬದವರು. ಯಡಿಯೂರಪ್ಪನವರ ಇಡೀ ಕುಟುಂಬ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿಯೇ ಇದೆ. ಬಿ ಎಸ್ ವೈ ಸಿಎಂ ಆಗುವ ಮೊದಲು ಯಾರೂ ಜೊತೆಯಲ್ಲಿ ಇರಲಿಲ್ಲ. ವಿಜಯೇಂದ್ರ ವ್ಯಾಮೋಹದ ಪರಾಕಾಷ್ಠೆ ತಲುಪಿದ್ದಾರೆ ಎಂದು ಯತ್ನಾಳ್ ತಿರುಗೇಟು ನೀಡಿದ್ದಾರೆ.


Provided by

ಸರ್ಕಾರದ ವಿರುದ್ಧ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿದ್ದರೂ, ಕ್ಯಾರೇ ಮಾಡದ ಯತ್ನಾಳ್ ಮತ್ತೆ ಸಿಎಂ ಹಾಗೂ ಸಿಎಂ ಪುತ್ರ, ಕುಟುಂಬದ ವಿರುದ್ಧ ಗುಡುಗಿದ್ದಾರೆ.

ಇತ್ತೀಚಿನ ಸುದ್ದಿ