ದಕ್ಷಿಣ ಕನ್ನಡದ 3 ಯುವಕರ ಹತ್ಯೆಗೆ ಕೋಮು ದ್ವೇಷವೇ ಕಾರಣ ಎಂಬ ಭಾವನೆ ಹುಟ್ಟಿದೆ: ಆಮ್ ಆದ್ಮಿ ಪಕ್ಷ - Mahanayaka

ದಕ್ಷಿಣ ಕನ್ನಡದ 3 ಯುವಕರ ಹತ್ಯೆಗೆ ಕೋಮು ದ್ವೇಷವೇ ಕಾರಣ ಎಂಬ ಭಾವನೆ ಹುಟ್ಟಿದೆ: ಆಮ್ ಆದ್ಮಿ ಪಕ್ಷ

amadmi
03/08/2022

ಮಂಗಳೂರು: ಕಳೆದೆರಡು ವಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆಯು ಪ್ರಕ್ಷುಬ್ಧ ವಾತಾವರಣವನ್ನು ಅನುಭವಿಸುತ್ತಿದೆ. ಬೆಳ್ಳಾರೆಯಲ್ಲಿ ಇಬ್ಬರು ಹಾಗೂ ಸುರತ್ಕಲ್ ನಲ್ಲಿ ಒಬ್ಬರು ಹೀಗೆ ಜಿಲ್ಲೆಯಲ್ಲಿ 3 ಅಮಾಯಕರ ಕೊಲೆಯಾಗಿದೆ.

ಇದಕ್ಕೆ ಕೋಮು ದ್ವೇಷವೇ ಕಾರಣ ಎಂಬ ಭಾವನೆ ಹುಟ್ಟಿದ್ದು ಇಡೀ ಜಿಲ್ಲೆಯ ಜನತೆ ಭಯಭೀತರಾಗಿದ್ದಾರೆ ಎಂದು ಆಪ್ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತವು ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಮುಂದೆ ಬಂದು ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ವ್ಯಾಪಾರೋದ್ಯಮಗಳ ಸಂಘಗಳ ಮುಖಂಡರು, ಸೇವಾ ಸಂಸ್ಥೆಗಳು, ಸಾಂಸ್ಕೃತಿಕ ಸಾಂಸ್ಕೃತಿಕ ಜಗತ್ತಿನ ಪ್ರತಿನಿಧಿಗಳು, ವಿದ್ಯಾ ಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿ ನಾಯಕರು ಹಾಗೂ ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆದು ಶಾಂತಿ ಸಭೆ ನಡೆಸಿ ಜನತೆಗೆ ಸಾಂತ್ವನ ಹೇಳುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.


Provided by

ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡಾ ಶಾಂತಿ ಸಮಿತಿಗಳನ್ನು ರಚಿಸಿ ಶಾಂತಿ ಸಭೆಗಳನ್ನು ನಡೆಸಿ ಸಾಮಾನ್ಯ ನಾಗರಿಕರಲ್ಲಿ ವಿಶ್ವಾಸ ಹುಟ್ಟುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಆಮ್ ಆದ್ಮ ಪಾರ್ಟಿ ಸಂಪೂರ್ಣ ಸಹಕಾರ ನೀಡಲು ತಯಾರಿದೆ ಎಂದರು.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ