ದಕ್ಷಿಣ ಕನ್ನಡ: ಭೀಮ್ ಸೇನೆಯಿಂದ ದಮ್ಮ ಚಕ್ರ ಪರಿವರ್ತನಾ ದಿನಾಚರಣೆ - Mahanayaka
11:32 PM Sunday 14 - September 2025

ದಕ್ಷಿಣ ಕನ್ನಡ: ಭೀಮ್ ಸೇನೆಯಿಂದ ದಮ್ಮ ಚಕ್ರ ಪರಿವರ್ತನಾ ದಿನಾಚರಣೆ

bheem sene
15/10/2021

ಮುತ್ತೂರು: ಅಕ್ಟೋಬರ್ ೧೪,೧೯೫೬ ರಂದು ಪರಮಪೂಜ್ಯ ಬಾಬಾ ಸಾಹೇಬ್  ಡಾಕ್ಟರ್‌ ಭೀಮ್  ರಾವ್‌ ಅಂಬೇಡ್ಕರ್ ಐದು ಲಕ್ಷಗಳಿಗಿಂತಲೂ ಮಿಗಿಲಾದ ಜನಸಾಗರದ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ದೀಕ್ಷೆ ಪಡೆದ ದಿನವಾದ ಅಕ್ಟೋಬರ್ 14ರಂದು ದಮ್ಮ ಚಕ್ರ ಪರಿವರ್ತನಾ ದಿನಾಚರಣೆಯನ್ನು ಭೀಮ್ ಸೇನೆ ದಕ್ಷಿಣ ಕನ್ನಡದ ವತಿಯಿಂದ ಮುತ್ತೂರಿನಲ್ಲಿ ನಡೆಸಲಾಯಿತು.


Provided by

ಕಾರ್ಯಕ್ರಮದಲ್ಲಿ  ತುಳು ಸಾಹಿತಿ, ಭರವಸೆಯ ಬರಹಗಾರ ಸತೀಶ್ ಕಕ್ಕೆಪದವು, ಮುತ್ತೂರು ಸತ್ಯ ಸಾರಮಾನಿ ಕ್ಷೇತ್ರದ ಪ್ರಧಾನ ಅರ್ಚಕರಾದ ಹರಿಯಪ್ಪ ಮುತ್ತೂರು, ಗೌರವ ಅಧ್ಯಕ್ಷರಾದ ಗೋಪಾಲ ಮುತ್ತೂರು, ಅಧ್ಯಕ್ಷರಾದ ಲೋಕೇಶ್ ಮುತ್ತೂರು ಭೀಮ್ ಸೇನೆಯ ಸಂಚಾಲಕ ರಾದ ಜಗದೀಶ್, ಸಂಘಟನ ಕಾರ್ಯದರ್ಶಿ ನಿತಿನ್ ಮುತ್ತೂರು, ಜೈಭೀಮ್ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕುಮಾರಿ ಮಾನ್ಯ ಹಾಗೂ ಸರ್ವ ಸದಸ್ಯರು ಪಾಲ್ಗೊಂಡು ಬುದ್ಧ ವಂದನೆಯಿಂದ ಮೊದಲ್ಗೊಂಡು ಈ ಐತಿಹಾಸಿಕ ದಿನದ ಮಹತ್ವವನ್ನು ಅರ್ಥವತ್ತಾಗಿ ಆಚರಿಸಲಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಪುತ್ತೂರು: ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾದಿಂದ 65ನೇ ಧಮ್ಮ‌ದೀಕ್ಷಾ ಕಾರ್ಯಕ್ರಮ

ಪರಿವರ್ತನೆ ಬಯಸುವ ಚಲನಶೀಲ ಮನುಷ್ಯರಿಗೆಲ್ಲರಿಗೂ 65ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು

ಅಕ್ಷರಸ್ಥರೇ ಇವತ್ತು ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಮೋಸ ಮಾಡುತ್ತಿದ್ದಾರೆ | ಡಾ.ಎಚ್.ಟಿ. ಪೋತೆ

ಬುದ್ಧರ ದೃಷ್ಟಿಯಲ್ಲಿ ದೇವರು

ಡಾ.ಅಂಬೇಡ್ಕರರ ಬುದ್ಧ ಪಯಣ | ರಘೋತ್ತಮ ಹೊ.ಬ

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01

ಕರಂಗೋಲು ಕುಣಿತ: ಅದರ ಸಾಮಾಜಿಕ ಮತ್ತು ಅಲೌಕಿಕ ನೆಲೆಗಳು

ಇತ್ತೀಚಿನ ಸುದ್ದಿ