"ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ" ಎಂದು ದರ್ಶನ್ ಪ್ರಕರಣದಲ್ಲಿ ಉಮಾಪತಿ ಹೀಗೆ ಹೇಳಿದ್ದೇಕೆ? - Mahanayaka
6:16 PM Friday 20 - September 2024

“ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ” ಎಂದು ದರ್ಶನ್ ಪ್ರಕರಣದಲ್ಲಿ ಉಮಾಪತಿ ಹೀಗೆ ಹೇಳಿದ್ದೇಕೆ?

umaparti aruna kumari darshan
13/07/2021

ಬೆಂಗಳೂರು: ನಟ ದರ್ಶನ್ ಗೆ 25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿರ್ಮಾಪಕ ಉಮಾಪತಿಯನ್ನು ಬೊಟ್ಟು ಮಾಡಲಾಗುತ್ತಿದೆ. ಈ ಬಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಉಮಾಪತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ದಡ್ಡ ಒಪ್ಪಿಕೊಳ್ತೇನೆ. ಆದರೆ 25 ಕೋಟಿ ರೂಪಾಯಿ ವ್ಯವಹಾರದಲ್ಲಿ ನೀವು ಹೇಗೆ ಯಾಮಾರಿದ್ರಿ..?ನಿಮಗೆ ಇದರ ಬಗ್ಗೆ ಅನುಮಾನ ಮೂಡಲೇ ಇಲ್ಲವಾ..? ಇಷ್ಟು ದಿನ ಕಳೆದರೂ ಮಲ್ಲೇಶ್​ ರನ್ನ ನೀವೇಕೆ ಟ್ರೇಸ್​ ಮಾಡಲಿಲ್ಲ..? ಅರುಣಾ ಕುಮಾರಿಯನ್ನ ನೀವೇಕೆ ಬಿಟ್ಟು ಕಳಿಸಿದ್ದೀರಿ..? ಎಂದು ಅವರು ದರ್ಶನ್ ಹಾಗೂ ಟೀಂನ್ನು ಪ್ರಶ್ನಿಸಿದ್ದಾರೆ.

ನನಗೆ ನಮ್ಮ ಪೊಲೀಸ್​ ಮೇಲೆ ನಂಬಿಕೆ ಇದೆ. ದರ್ಶನ್​ ಹಾಗೂ ನನ್ನ ನಡುವೆ ತಂದಿಡುವ ಕೆಲಸ ಮಾಡಲಾಗ್ತಿದೆ. ಅರುಣಾ ಕುಮಾರಿ ಹರ್ಷ ಮೆಲಂಟಾ ಜೊತೆ ಮಾತನಾಡುತ್ತಾಳೆ. ನನ್ನ ಹಾಗೂ ದರ್ಶನ್​ ಜೊತೆ ಏಕೆ ಮಾತನಾಡೋದಿಲ್ಲ..? ಬೆಂಗಳೂರು ಪೊಲೀಸರ ಮೇಲೆ ರಾಕೇಶ್​ ಪಾಪಣ್ಣಗೆ ನಂಬಿಕೆ ಇಲ್ಲವಂತೆ. ಹೀಗಾಗಿ ಮೈಸೂರಿನಲ್ಲಿ ದೂರು ನೀಡಿದ್ದಾರಂತೆ. ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ. ಇನ್ನು ಮರ್ಯಾದೆ ಉಳಿಯೋದು ಏನಿಲ್ಲ ಎಂದು ಅವರು ಹೇಳಿದರು.


Provided by

ನನಗೆ ಏಪ್ರಿಲ್​ ನಿಂದಲೇ ಅರುಣಾಕುಮಾರಿಯ ಪರಿಚಯವಾಗಿತ್ತು. ಪ್ರಾಪರ್ಟಿ ವಿಚಾರವಾಗಿ ಆಕೆಯ ಪರಿಚಯವಾಗಿತ್ತು. ದರ್ಶನ್​ ಸರ್​ ಹೆಸರು ಕೇಳಿದ್ದರಿಂದ ನಾನು ಆಧಾರ್​ ಕಾರ್ಡ್ ಫೋಟೋ ಕಳಿಸಿದ್ದೆ. ನನ್ನ ಮೇಲೆ ಆರೋಪ ಬಂದಿದೆ ನಾನು ಸಾಬೀತು ಮಾಡಲೇಬೇಕು ಎಂದು ಅವರು ಹೇಳಿದರು.

ದರ್ಶನ್​ ಮಾಡಿದ ಪಾರ್ಟಿಗೆ ನನ್ನ ಕಾರನ್ನೇ ಒಳ ಹೋಗಲು ಬಿಟ್ಟಿಲ್ಲ. ಅಂದಮೇಲೆ ಲಾಕ್​ಡೌನ್​ ಸಂದರ್ಭದಲ್ಲಿ ಅರುಣಾ ಕುಮಾರಿಗೆ ಹೇಗೆ ಅನುಮತಿ ನೀಡಿದರು..? ನಾನು ಬುದ್ಧಿವಂತನಲ್ಲ.. ನಾನು ದಡ್ಡ. ಒಪ್ಪಿಕೊಳ್ತೇನೆ. ಆದರೆ ನೀವು ಬುದ್ಧಿವಂತರಲ್ವಾ ನೀವು ಹೇಗೆ ಯಾಮಾರಿದ್ರಿ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿ