ದತ್ತಜಯಂತಿಗೆ ಚಾಲನೆ: ಸಿ.ಟಿ.ರವಿ ಸೇರಿದಂತೆ 250ಕ್ಕೂ ಅಧಿಕ ಭಕ್ತರಿಂದ ಮಾಲಾಧಾರಣೆ - Mahanayaka

ದತ್ತಜಯಂತಿಗೆ ಚಾಲನೆ: ಸಿ.ಟಿ.ರವಿ ಸೇರಿದಂತೆ 250ಕ್ಕೂ ಅಧಿಕ ಭಕ್ತರಿಂದ ಮಾಲಾಧಾರಣೆ

dattamaladharane
28/11/2022

ಚಿಕ್ಕಮಗಳೂರು: ವಿ.ಹೆಚ್.ಪಿ. ಹಾಗೂ ಬಜರಂಗದಳದ ದತ್ತಜಯಂತಿಗೆ ಚಾಲನೆ ದೊರೆತಿದ್ದು, ಶಾಸಕ ಸಿ.ಟಿ.ರವಿ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಮಂದಿ ಇಂದು ಮಾಲಾಧಾರಣೆ ಮಾಡಿದರು.


Provided by

ಚಿಕ್ಕಮಗಳೂರು ನಗರದ ಕಾಮಧೇನು ಮಹಾಗಣಪತಿ ದೇವಸ್ಥಾನದಲ್ಲಿ ಮಾಲಾಧಾರಣೆ ಮಾಡಲಾಯಿತು. ಈ ಬಾರಿ ಅರ್ಚಕರ ನೇತೃತ್ವದಲ್ಲಿ ವಿ.ಎಚ್.ಪಿ ಹಾಗೂ ಬಜರಂಗದಳ ದತ್ತಜಯಂತಿ ಆಚರಿಸಲು ಮುಂದಾಗಿದೆ.

ಇಂದಿನಿಂದ ಡಿಸೆಂಬರ್ 8 ರವರೆಗೆ ನಡೆಯಲಿರುವ ದತ್ತಜಯಂತಿ ಆಚರಣೆ ನಡೆಯಲಿದೆ. ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಜಯಂತಿ ನಡೆಯಲಿದೆ. ರಾಜ್ಯಾದ್ಯಂತ ಸಾವಿರಾರು ಭಕ್ತರು ದತ್ತ ಮಾಲಾಧಾರಣೆ ಮಾಡಲಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ