ಮಕ್ಕಳನ್ನು ಕಾಡುತ್ತಿದೆ ಸೂಕ್ಷ್ಮ ಪೋಷಕಾಂಶಗಳ ಕೊರತೆ: ಪೋಷಕರು ಗಮನಿಸಬೇಕಾದ ಅಂಶಗಳೇನು? - Mahanayaka

ಮಕ್ಕಳನ್ನು ಕಾಡುತ್ತಿದೆ ಸೂಕ್ಷ್ಮ ಪೋಷಕಾಂಶಗಳ ಕೊರತೆ: ಪೋಷಕರು ಗಮನಿಸಬೇಕಾದ ಅಂಶಗಳೇನು?

beseutta
02/07/2024

ಭಾರತದಾದ್ಯಂತ ಹಲವು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಬೆಳವಣಿಗೆಗೆ ನೆರವಾಗುವ ಪೋಷಕಾಂಶಗಳು ಆಹಾರದಲ್ಲಿ ಸಿಗದೇ ಹೋದಾಗ ಪೌಷ್ಠಿಕಾಂಶದ ಕೊರತೆ ಉಂಟಾಗಬಹುದು.


Provided by

ಬೆಳೆಯುವ ಮಕ್ಕಳ ಮೂಳೆ, ಚರ್ಮ, ಸ್ನಾಯುಗಳು, ನರಗಳು ಸೇರಿದಂತೆ ದೇಹದ ವಿವಿಧ ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಪೋಷಕಾಂಶಗಳು ಅತ್ಯಗತ್ಯ. ವಿಟಮಿನ್ ಡಿ, ಸತು ಮತ್ತು ಕಬ್ಬಿಣದಂತಹ ಸೂಕ್ಷ್ಮ ಪೋಷಕಾಂಶಗಳು ಮಕ್ಕಳ ಬೆಳವಣಿಗೆ ಅತ್ಯವಶ್ಯವಾಗಿದೆ. ಇವುಗಳನ್ನೇ ಸೂಕ್ಷ್ಮ ಪೋಷಕಾಂಶಗಳು ಅಂತಾ ಕರೆಯುತ್ತಾರೆ.

ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವಿನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸದೇ ಇರುವುದು ಮಕ್ಕಳಲ್ಲಿ ಅಪೌಷ್ಠಿಕತೆಗೆ ಪ್ರಮುಖ ಕಾರಣವಾಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಸೊಪ್ಪು, ತರಕಾರಿಯಂತಹ ಪೋಷಕಾಂಶ ಸಮೃದ್ಧ ಆಹಾರಗಳನ್ನು ನೀಡುವ ಅಭ್ಯಾಸ ಮಾಡಿಕೊಳ್ಳಬೇಕು.

ಸಾಮಾನ್ಯ ಶೀತ, ಜ್ವರ, ವೈರಲ್ ಸೋಂಕಿನಂತಹ ಕೆಲವು ರೋಗಗಳು ಮಕ್ಕಳ ಹಸಿವನ್ನು ಕಸಿಯಬಹುದು ಎಂದು ಖಾರ್ ಘರ್ ನ ಮದರ್ ಹುಡ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಪ್ರಶಾಂತ್ ಮೊರಾಲ್ವಾರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಪೌಷ್ಠಿಕತೆಯ ಲಕ್ಷಣಗಳು:

* ಶಕ್ತಿಯ ಕೊರತೆ
* ನಿರಂತರ ಕೋಪ ಮತ್ತು ವಿಚಿತ್ರವಾಗಿ ವರ್ತಿಸುವುದು
* ಹಸಿವಾಗದೇ ಇರುವುದು, ತಟ್ಟೆಯಲ್ಲಿ ಹಾಗೇ ಆಹಾರ ಬಿಡುವುದು, ಯಾವಾಗಲೂ ಅನಾರೋಗ್ಯದ ಭಾವನೆ.
* ಸ್ಥೂಲಕಾಯವು ಪೌಷ್ಟಿಕಾಂಶದ ಕೊರತೆ, ಯಾವಾಗಲೂ ಹಸಿವಾಗುವುದು ಇಂತಹ ಭಾವನೆಗಳನ್ನು ಉಂಟು ಮಾಡಬಹುದು. ಅಂತಹ ಎಷ್ಟು ತಿಂದರೂ ತೃಪ್ತರಾಗುವುದಿಲ್ಲ.
* ಒಣ ಮತ್ತು ಸುಕ್ಕುಗಟ್ಟಿದ ಕೂದಲು
* ಗಾಯಗಳು ನಿಧಾನಕ್ಕೆ ಒಣಗುವುದು
* ಆರೋಗ್ಯಕರ ಆಹಾರ ಸೇವಿಸದೇ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು.

ಪ್ರೊಟೀನ್, ಕಬ್ಬಿಣಾಂಶ, ವಿಟಮಿನ್ ಡಿ, ಸತು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ನಾರಿನಾಂಶದ ಕೊರತೆಯು ಸೂಕ್ಷ್ಮ ಪೋಷಕಾಂಶಗಳ ಕೊರತೆಗೆ ಮುಖ್ಯ ಕಾರಣವಾಗುವುದರಿಂದ ಇವುಗಳ ಕೊರತೆಯನ್ನು ನೀಗಿಸುವ ಆಹಾರ ಸೇವನೆಗೆ ಹೆಚ್ಚು ಒತ್ತು ನೀಡಬೇಕು.

ಸೇಬು, ಪೇರಳೆ ಮತ್ತು ಬೆರ್ರಿ ಹಣ್ಣುಗಳು ಪೊಟ್ಯಾಸಿಯಮ್ ಮತ್ತು ನಾರಿನಾಂಶದ ಉತ್ತಮ ಮೂಲವಾಗಿದೆ. ಇದು ಸ್ನಾಯುಗಳನ್ನು ಬಲಗೊಳಿಸುತ್ತದೆ. ಮಲಬದ್ಧತೆ ಅಥವಾ ಗ್ಯಾಸ್–ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಮೊಟ್ಟೆ, ಡೈರಿ ಉತ್ಪನ್ನಗಳು ಮತ್ತು ಸೊಪ್ಪು ತರಕಾರಿಗಳಂತಹ ಪ್ರೊಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಮಕ್ಕಳಲ್ಲಿ ಪ್ರೋಟೀನ್ ಕೊರತೆಯ ಸಮಸ್ಯೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಕಬ್ಬಿಣ ಮತ್ತು ವಿಟಮಿನ್ ಡಿಯಂತಹ ಸೂಕ್ಷ್ಮ ಪೋಷಕಾಂಶಗಳನ್ನು ಪಾಲಕ್, ಕಡಲೆ, ಅಗಸೆಬೀಜಗಳು, ಸೋಯಾಬೀನ್ ಮತ್ತು ಕರಬೂಜುಗಳಂತಹ ಆಹಾರಗಳಲ್ಲಿ ಸುಲಭವಾಗಿ ಕಾಣಬಹುದು. ಸತು ಮತ್ತು ಕ್ಯಾಲ್ಸಿಯಂ ಕೊರತೆಯಿರುವ ಮಕ್ಕಳು ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ಡೈರಿ ಉತ್ಪನ್ನಗಳನ್ನು ಹಾಲು, ಪನೀರ್, ಮಜ್ಜಿಗೆ ಮತ್ತು ಮೊಸರು ತಿನ್ನಲು ಪ್ರಯತ್ನಿಸಬೇಕು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ