ಇಂದು ಸಂಜೆ ದೆಹಲಿ ತಲುಪಲಿರುವ ಭಾರತೀಯರನ್ನು ಹೊತ್ತ 6ನೇ ವಿಮಾನ - Mahanayaka
4:24 AM Wednesday 5 - February 2025

ಇಂದು ಸಂಜೆ ದೆಹಲಿ ತಲುಪಲಿರುವ ಭಾರತೀಯರನ್ನು ಹೊತ್ತ 6ನೇ ವಿಮಾನ

ukraine
28/02/2022

ನವದೆಹಲಿ : ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಹೊತ್ತ ಆರನೇ ವಿಮಾನವು ಸೋಮವಾರ ಸಂಜೆ ದೆಹಲಿಯನ್ನು ತಲುಪಲಿದೆ.

ಉಕ್ರೇನ್ ಗಡಿ ದಾಟಿ ಹಂಗೇರಿಗೆ ಬಂದಿದ್ದ 240 ಮಂದಿಯನ್ನು ಸ್ವದೇಶಕ್ಕೆ ಕರೆತರಲಾಗುತ್ತಿದೆ. ಆರನೇ ಆಪರೇಷನ್ ಗಂಗಾ ವಿಮಾನವು ಬುಡಾಪೆಸ್ಟ್‌ನಿಂದ ಟೇಕ್ ಆಫ್ ಆಗಿದ್ದು, 240 ಭಾರತೀಯ ಪ್ರಜೆಗಳನ್ನು ದೆಹಲಿಗೆ ಹಿಂತಿರುಗಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಉಕ್ರೇನ್‌ನಿಂದ ಪಲಾಯನ ಮಾಡುವ ಇರಾನ್ ಅಥವಾ ಭಾರತದಂತಹ ಮೂರನೇ ದೇಶಗಳ ನಾಗರಿಕರಿಗೆ ಹಂಗೇರಿ ಮಾನವೀಯ ಕಾರಿಡಾರ್‌ನ್ನು ತೆರೆದಿದೆ. ವೀಸಾ ಇಲ್ಲದೆ ಅವರನ್ನು ಒಳಗೆ ಬಿಡುತ್ತಿದೆ ಮತ್ತು ಅವರನ್ನು ಡೆಬ್ರೆಸೆನ್‌ನ ಹತ್ತಿರದ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದೆ.

ಈಗಾಗಲೇ 5 ವಿಮಾನಗಳಲ್ಲಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದ್ದು, ಇನ್ನುಳಿದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಸರ್ವ ಪ್ರಯತ್ನಗಳನ್ನು ಕೇಂದ್ರ ಸರಕಾರ ಮಾಡುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ: ವಿರೋಧಿಸಿದಕ್ಕೆ ಪತ್ನಿಯ ತಲೆ ಕಡಿದ ಪತಿ

ಚಿಕ್ಕಬಳ್ಳಾಪುರದಲ್ಲಿ ಭಾರೀ ಸ್ಫೋಟ: ಮನೆ ಸಂಪೂರ್ಣ ಛಿದ್ರ; ದಂಪತಿಗೆ ಗಂಭೀರ ಗಾಯ

ರೈತನ ಮೇಲೆ ಕರಡಿ ದಾಳಿ: ಅರಣ್ಯಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ದೇಶದ ರಕ್ಷಣೆಗೆ ಬಂದೂಕು ಹಿಡಿದ ಉಕ್ರೇನ್ ಅಧ್ಯಕ್ಷ

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ವೇಳೆ ವ್ಯಕ್ತಿ ಸಾವು: ಇಬ್ಬರ ಬಂಧನ

ಇತ್ತೀಚಿನ ಸುದ್ದಿ