ನಾಗರಿಕ ಸಮಿತಿಯಿಂದ ಬೆಲ್ಲದ ಗಣಪತಿ ಪ್ರದರ್ಶನ - Mahanayaka

ನಾಗರಿಕ ಸಮಿತಿಯಿಂದ ಬೆಲ್ಲದ ಗಣಪತಿ ಪ್ರದರ್ಶನ

ganapati
20/09/2023

ಉಡುಪಿ: ನಾಗರಿಕ ಸಮಿತಿಯ ಆಯೋಜನೆ ಮತ್ತು ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಗಣೇಶ ಚತುರ್ಥಿಯನ್ನು ವಿನೂತನ ರೀತಿಯಲ್ಲಿ ಪರಿಸರ ಸ್ನೇಹಿಯಾಗಿ ಮಾರುತಿ ವೀಥಿಕಾದಲ್ಲಿ ಆಚರಿಸಲಾಯಿತು.


Provided by

ಶುದ್ಧ ಬೆಲ್ಲದಿಂದ ತಯಾರಿಸುವ  ಗಣಪತಿಯನ್ನು ಪ್ರದರ್ಶನ ಮಂಟಪದಲ್ಲಿ ಸ್ಥಾಪಿಸಿ ಪ್ರದರ್ಶಿಸಲಾಯಿತು. ಮಂಡ್ಯದ ಆಲೆಮನೆಯಲ್ಲಿ ನುರಿತ ಕಲಾವಿದರಿಂದ ಎರಡಡಿ ಚೌಕಾಕೃತಿಯ ಬೆಲ್ಲದ ಗಟ್ಟಿಯಲ್ಲಿ ಗಣಪತಿಯನ್ನು ನಾಜೂಕಿನಿಂದ ಕೆತ್ತಿಸಿ, ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಉಡುಪಿಗೆ ತರಿಸಿದ್ದರು. ವಿನೂತನ ರೀತಿಯ ಗಣಪತಿ ವೀಕ್ಷಿಸಿ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು. ಭಕ್ತರ ಒತ್ತಾಯದ ಮೇರೆಗೆ ಬೆಲ್ಲದ ಗಣಪತಿಯನ್ನು ಗುರುವಾರದ ತನಕ ವೀಕ್ಷಣೆಗೆ ಇಡಲು ತೀರ್ಮಾನಿಸಿದ್ದಾರೆ.


Provided by

ಪ್ರದರ್ಶನ ಕಾರ್ಯಕ್ರಮವನ್ನು ಪರಿಸರ ತಜ್ಞ, ಡಾ. ಸತೀಶ್ ನಾಯ್ಕ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಭಾಸ್ಕರ್ ಶೇರಿಗಾರ್, ಜೋಸ್ ಆಲುಕ್ಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಾಜೇಶ್ ಎನ್.ಆರ್, ಹಾಗೂ ಗೋಪಾಲ್, ಭೀಮಾ ಆಭರಣ ಮಳಿಗೆಯ ಅಷ್ಮತ್  ರಾವ್, ಶ್ರೀನಿಧಿ ಭಟ್, ಕೊಟೆಕ್ ಮಹೇಂದ್ರ ಬ್ಯಾಂಕಿನ ಸಿಬ್ಬಂದಿ, ನಾಗರಿಕ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ