ಹಾಡಹಗಲೇ ಸಮಾಜವಾದಿ ಪಕ್ಷದ ಕಾರ್ಯಕರ್ತೆಯ ಸೀರೆ ಎಳೆದ ಬಿಜೆಪಿ ಕಾರ್ಯಕರ್ತರು - Mahanayaka

ಹಾಡಹಗಲೇ ಸಮಾಜವಾದಿ ಪಕ್ಷದ ಕಾರ್ಯಕರ್ತೆಯ ಸೀರೆ ಎಳೆದ ಬಿಜೆಪಿ ಕಾರ್ಯಕರ್ತರು

bjp activist in uttar pradesh
09/07/2021

ಲಕ್ನೋ:  ಉತ್ತರ ಪ್ರದೇಶದ ಬ್ಲಾಕ್ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ವೇಳೆ, ಅಡ್ಡಗಟ್ಟಿದ ಬಿಜೆಪಿ ಕಾರ್ಯಕರ್ತರು , ಸಮಾಜವಾದಿ ಪಕ್ಷದ ಮಹಿಳಾ ಕಾರ್ಯಕರ್ತೆಯ ಸೀರೆ ಎಳೆದ ಆಘಾತಕಾರಿ ಘಟನೆ ವರದಿಯಾಗಿದೆ.

ಘಟನೆ ಸಂಬಂಧ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಲಕ್ನೋದಿಂದ 130 ಕಿ.ಮೀ. ದೂರದಲ್ಲಿರುವ ಲಖಿಂಪುರ ಖೇರಿಯಲ್ಲಿ ಈ ಘಟನೆ ನಡೆದಿದ್ದು, ಅಭ್ಯರ್ಥಿಯ ಬೆಂಬಲಿಗರಾಗಿ ನಾಮಪತ್ರ ಸಲ್ಲಿಸಲು ಕಾರ್ಯಕರ್ತೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಬೇಕು ಎನ್ನುವ ಕಾರಣಕ್ಕೆ ಈ ಕುಕೃತ್ಯಕ್ಕೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಕೈಹಾಕಿದ್ದರು ಎಂದು ಹೇಳಲಾಗಿದೆ. ಹಾಡಹಗಲೇ ಮಹಿಳೆಯ ಕೈ ಹಿಡಿದೆಳೆದು, ಸೀರೆಯ ಸೆರಗಿಗೆ ಕೈಹಾಕಿ ಮಹಿಳೆಯನ್ನು ವಿವಸ್ತ್ರಗೊಳಿಸಲು ಯತ್ನಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ  ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, ಇದು ಬಿಜೆಪಿ ಕಾರ್ಯಕರ್ತರ ಕೆಲಸವಾಗಿದೆ. ಯೋಗಿ ಆದಿತ್ಯನಾಥ್ ಅಧಿಕಾರ ಪಡೆಯಲು ಬೆಳೆಸಿರುವ ಹಸಿದಿರುವ ಗೂಂಡಾಗಳು ಇವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪ್ರಾಪ್ತೆಗೆ ಮಾದಕ ವ್ಯಸನ ಕಲಿಸಿ ಲೈಂಗಿಕ ದೌರ್ಜನ್ಯ: ಬೆಚ್ಚಿ ಬೀಳಿಸಿದ ಯುವಕರ ಗ್ಯಾಂಗ್ ನ ಕೃತ್ಯ

https://twitter.com/manishjagan/status/1413105521494618120?s=20

ಇತ್ತೀಚಿನ ಸುದ್ದಿ