ಖಲಿಸ್ತಾನ ವಿವಾದ: 'ದೇಶಭಕ್ತಿಯನ್ನು ಸಾಬೀತುಪಡಿಸುವ ಅಗತ್ಯವಿಲ್ಲ'; ಗಾಯಕ ಶುಭ್ ಭಾರತ ಮತ್ತು ಪಂಜಾಬ್ ನ ಹೆಮ್ಮೆಯ ಪುತ್ರ ಎಂದು ಬೆಂಬಲ ನೀಡಿದ ಸಂಸದೆ ಬಾದಲ್ - Mahanayaka
4:59 AM Friday 20 - September 2024

ಖಲಿಸ್ತಾನ ವಿವಾದ: ‘ದೇಶಭಕ್ತಿಯನ್ನು ಸಾಬೀತುಪಡಿಸುವ ಅಗತ್ಯವಿಲ್ಲ’; ಗಾಯಕ ಶುಭ್ ಭಾರತ ಮತ್ತು ಪಂಜಾಬ್ ನ ಹೆಮ್ಮೆಯ ಪುತ್ರ ಎಂದು ಬೆಂಬಲ ನೀಡಿದ ಸಂಸದೆ ಬಾದಲ್

23/09/2023

ಖಲಿಸ್ತಾನಕ್ಕೆ ಬೆಂಬಲ ನೀಡಿದ ಆರೋಪದ ಮೇಲೆ ಭಾರೀ ವಿರೋಧ ಎದುರಿಸುತ್ತಿರುವ ಗಾಯಕ ಶುಭ್ ಅವರಿಗೆ ಸಂಸದೆ ಹರ್ಸಿಮ್ರತ್ ಬಾದಲ್ ಬೆಂಬಲ ನೀಡಿದ್ದಾರೆ. ಶುಭ್ ತನ್ನ ದೇಶಭಕ್ತಿಯನ್ನು ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ. ಏಕೆಂದರೆ ಅವರು ಹೆಮ್ಮೆಯ ಭಾರತೀಯ ಮತ್ತು ಪಂಜಾಬ್ ನ ಮಗ ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ. ಲೋಕಸಭೆಯಲ್ಲಿ ಬಟಿಂಡಾ ಕ್ಷೇತ್ರವನ್ನು ಪ್ರತಿನಿಧಿಸುವ ಹರ್ಸಿಮ್ರತ್ ಬಾದಲ್ ಅವರು ಶುಭ್ ಅವರನ್ನು ಸಮರ್ಥಿಸಿಕೊಂಡು ಅವರು ಪಂಜಾಬ್ ಮತ್ತು ಭಾರತಕ್ಕೆ ಖ್ಯಾತಿಯನ್ನು ತಂದ ಪ್ರತಿಭಾವಂತ ಕಲಾವಿದ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಾದಲ್, “ಗಾಯಕ ಶುಭ್, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ನೀವು ಪಂಜಾಬ್ ಮತ್ತು ಭಾರತದ ಹೆಮ್ಮೆಯ ಮಗನಾಗಿರುವುದರಿಂದ ನಿಮ್ಮ ದೇಶಭಕ್ತಿಯನ್ನು ಸಾಬೀತುಪಡಿಸುವ ಅಗತ್ಯವಿಲ್ಲ.

ಪಂಜಾಬ್ ಪರವಾಗಿ ಮಾತನಾಡುವ ಶುಭ್ ಮತ್ತು ಇತರರನ್ನು ರಾಷ್ಟ್ರ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವ ಪಿತೂರಿಗಳಿಗೆ ಬಲಿಯಾಗದಂತೆ ಅಕಾಲಿ ದಳವು ದೇಶವಾಸಿಗಳಿಗೆ ಮನವಿ ಮಾಡಿದೆ’ ಎಂದಿದ್ದಾರೆ.


Provided by

ಪಂಜಾಬಿ-ಕೆನಡಿಯನ್ ರ್ಯಾಪರ್ ಶುಭ್ನೀತ್ ಸಿಂಗ್ (ಶುಭ್ ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಾರೆ) ಗುರುವಾರ ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದರಿಂದ “ತುಂಬಾ ನಿರಾಶೆಗೊಂಡಿದ್ದೇನೆ” ಎಂದು ಹೇಳಿದರು. ಖಲಿಸ್ತಾನ್ ಉದ್ದೇಶಕ್ಕೆ ಬೆಂಬಲ ನೀಡಿದ ಆರೋಪದ ಮೇಲೆ ರ್ಯಾಪರ್ ‘ಸ್ಟಿಲ್ ರೋಲಿನ್ ಇಂಡಿಯಾ ಪ್ರವಾಸ’ವನ್ನು ಈ ಹಿಂದೆ ರದ್ದುಗೊಳಿಸಲಾಗಿತ್ತು.

ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಶುಭ್ನೀತ್ ಸಿಂಗ್ ಅವರು ಕಳೆದ ಎರಡು ತಿಂಗಳುಗಳಿಂದ ತಮ್ಮ ಭಾರತ ಪ್ರವಾಸಕ್ಕಾಗಿ ಕಠಿಣ ಪ್ರಯತ್ನ ಮಾಡುತ್ತಿದ್ದರು. ಹಾಗೆಯೇ ತಮ್ಮ ತವರು ದೇಶದಲ್ಲಿ ಪ್ರದರ್ಶನ ನೀಡುವ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ