ಟೊಮೆಟೊ ಬೆಲೆ ಏರಿಕೆಗೆ ಹೋಟೆಲ್ ಮಾಲೀಕರು ಕಂಗಾಲು - Mahanayaka

ಟೊಮೆಟೊ ಬೆಲೆ ಏರಿಕೆಗೆ ಹೋಟೆಲ್ ಮಾಲೀಕರು ಕಂಗಾಲು

Hotel
16/07/2023

ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲಿ 120 ರ ಗಡಿಯನ್ನು ಟೊಮೆಟೊ ದಾಟಿದ್ದು ಗೃಹಿಣಿಯರಂತೆ ಹೋಟೆಲ್ ಮಾಲೀಕರು ಕಂಗಲಾಗಿದ್ದಾರೆ.

ಟೊಮೆಟೊ ಕರ್ರಿ, ಸಾಂಬಾರ್, ತಿಳಿಸಾರು, ಸಾಗು ಸೇರಿದಂತೆ ಬಹುತೇಕ ಖಾದ್ಯಗಳಿಗೆ ಟೊಮೆಟೊ ಬಳಸಲೇಬೇಕಿದ್ದು ಬಳಸಿದರೇ ನಷ್ಟ– ಬಳಸದಿದ್ದರೇ ರುಚಿ ಕಡಿಮೆಯಾಗುವ ಕಷ್ಟ ಎಂಬ ಸಂದಿಗ್ಧ ಪರಿಸ್ಥಿತಿ  ಎದುರಿಸುತ್ತಿದ್ದಾರೆ.

ಬೆಲೆ ಏರಿಕೆ ವಿರುದ್ಧ ಸರ್ಕಾರ ಸೂಕ್ತ ಗಮನ ಹರಿಸಬೇಕು, ರೈತರಿಗೆ ಬೆಲೆ ಏರಿಕೆಯ ಲಾಭ ಸಿಗುತ್ತಿಲ್ಲ, ನಮ್ಮ ಹೋಟೆಲಿಗೆ ಬರುವ ಹಲವಾರು ಮಂದಿ ರೈತರು ಇದನ್ನು ಹೇಳಿದ್ದಾರೆ, ದಲ್ಲಾಳಿಗಳಿಗೆ ಇದರ ಲಾಭ ಆಗುತ್ತಿದೆ ಎಂದು ಹೋಟೆಲ್ ಉದ್ಯಮಿ ಕಿಶೋರ್ ಶೆಟ್ಟಿ ಹೇಳಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ