‘ಭಾರತವು ಯಾರು ಬೇಕಾದರೂ ಬಂದು ನೆಲೆಸಬಹುದಾದ ಧರ್ಮಶಾಲಾ ಅಲ್ಲ’: ಕೇಂದ್ರ ಸಚಿವ ಶಿವರಾಜ್ ಚೌಹಾಣ್ ಹೇಳಿಕೆ

09/11/2024

ಭಾರತವು ಯಾರು ಬೇಕಾದರೂ ಬಂದು ನೆಲೆಸಬಹುದಾದ ‘ಧರ್ಮಶಾಲಾ’ ಅಲ್ಲ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ರಾಂಚಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಎಂಎಂ ನೇತೃತ್ವದ ಆಡಳಿತಾರೂಢ ಮೈತ್ರಿಕೂಟವು ನುಸುಳುಕೋರರನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಬುಡಕಟ್ಟು ಮಹಿಳೆಯರನ್ನು ಭ್ರಮೆಯ ಜಾಲದಲ್ಲಿ ಸಿಲುಕಿಸುವ ಮೂಲಕ ಮದುವೆಯಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾರತವು ಯಾರು ಬೇಕಾದರೂ ಬಂದು ನೆಲೆಸಬಹುದಾದ ಧರ್ಮಶಾಲೆಯಲ್ಲ. ವಿದೇಶಿ ನುಸುಳುಕೋರರು ಜಾರ್ಖಂಡ್ ಗೆ ಬಂದು ಗಂಭೀರ ಬೆದರಿಕೆ ಒಡ್ಡಿದ್ದಾರೆ. ಈ ದೇಶ ನಮ್ಮದು.
ನಮ್ಮ ಭೂಮಿ, ನೀರು, ಕಾಡುಗಳು, ನದಿಗಳು, ಪರ್ವತಗಳು ಮತ್ತು ಹೊಲಗಳು. ಅವುಗಳನ್ನು ನಮ್ಮಿಂದ ತೆಗೆದುಕೊಳ್ಳಲು ನಾವು ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version