ಈ ಬಾರಿಯಾದರೂ ‘ಜನೋತ್ಸವ’ ನಡೆಯಲಿ: ವಿಘ್ನ ಕಳೆಯಲು ಗಣಹೋಮ - Mahanayaka

ಈ ಬಾರಿಯಾದರೂ ‘ಜನೋತ್ಸವ’ ನಡೆಯಲಿ: ವಿಘ್ನ ಕಳೆಯಲು ಗಣಹೋಮ

janothsava
09/09/2022

ಬೆಂಗಳೂರು: ರಾಜ್ಯ ಸರ್ಕಾರದ ಜನೋತ್ಸವ ಕಾರ್ಯಕ್ರಮ ಎರಡು ಬಾರಿ ರದ್ದಾಗಿದ್ದು, ಮೂರನೇ ಬಾರಿಗೆ ಜನೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಮುಂದಿನ ಬಾರಿ ಯಾವುದೇ ಅಡಚಣೆ ಉಂಟಾಗ ಬಾರದು ಎಂಬ ನಿಟ್ಟಿನಲ್ಲಿ  9 ಮಂದಿ ಪುರೋಹಿತರಿಂದ ಗಣಹೋಮ ಮಾಡಿಸಲಾಗಿದೆ.


Provided by

ದೊಡ್ಡಬಳ್ಳಾಪುರದ ದೇವನಹಳ್ಳಿ ರಸ್ತೆ ಬಳಿ ಜನೋತ್ಸವ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಮೊದಲ ಬಾರಿಗೆ ಜನೋತ್ಸವ ಮುಂದೂಡಲಾಗಿತ್ತು.  ಎರಡನೇ ಬಾರಿಗೆ ಜನೋತ್ಸವಕ್ಕೆ ಸಿದ್ಧತೆ ನಡೆಸಲಾಗಿದ್ದ ಸಂದರ್ಭದಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ಅವರು ಅಕಾಲಿಕ ಮರಣಕ್ಕೀಡಾದರು.  ಹೀಗಾಗಿ ಎರಡು ಬಾರಿ ಜನೋತ್ಸವ ಕಾರ್ಯಕ್ರಮ ರದ್ದಾಗಿತ್ತು.

ಈ ಬಾರಿ ಕಾರ್ಯಕ್ರಮಕ್ಕೆ ಅಡಚಣೆಯಾಗಬಾರದು ಎಂದು  ಕಾರ್ಯಕ್ರಮದ ಹೆಸರನ್ನು ಜನಸ್ಪಂದನ ಎಂದು ಇಡಲಾಗಿದ್ದು, ಜೊತೆಗೆ ಪುರೋಹಿತರಿಂದ ಗಣಹೋಮ ಮಾಡಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಪ್ರಾರ್ಥಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ