ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ತಿವಿದು ಕೊಂದ ಕಾಡುಕೋಣ!
![somashekar](https://www.mahanayaka.in/wp-content/uploads/2022/12/somashekar.jpg)
29/12/2022
ಚಿಕ್ಕಮಗಳೂರು: ಕಾಡು ಪ್ರಾಣಿಗಳ ಹಾವಳಿಗೆ ಕಾಫಿನಾಡಿನ ಜನತೆ ತತ್ತರಿಸಿದ್ದು, ಆನೆಗಳ ಉಪಟಳದ ಬಳಿಕ ಇದೀಗ ಕಾಡುಕೋಣವೊಂದು ವ್ಯಕ್ತಿಯೊಬ್ಬರನ್ನು ತಿವಿದು ಹತ್ಯೆ ಮಾಡಿದೆ.
ಸೋಮಶೇಖರ್ (45) ಮೃತ ಪಟ್ಟ ದುರ್ದೈವಿಯಾಗಿದ್ದು, ಇವರು ಕಳಸ ತಾಲೂಕಿನ ತೋಟದೂರಿನ ತಮ್ಮ ತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ದಾಳಿ ನಡೆಸಿದ ಕಾಡುಕೋಣ ತಿವಿದು ಹತ್ಯೆ ಮಾಡಿದೆ.
ಸೋಮಶೇಖರ್ ಅವರು ಅಡಿಕೆ ತೋಟ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕಾಡುಕೋಣ ತಿವಿದಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಅವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka