ಎರಡಕ್ಷರ ಕನ್ನಡ ಬರೆಯಲಾಗದೇ ಪರದಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ   - Mahanayaka

ಎರಡಕ್ಷರ ಕನ್ನಡ ಬರೆಯಲಾಗದೇ ಪರದಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ  

shivaraj thangadgi
02/02/2025

ಕೊಪ್ಪಳ: ಕನ್ನಡದ ಎರಡಕ್ಷರ ಬರೆಯಲು  ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ  ಪರದಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಂಗನವಾಡಿ ಕೇಂದ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ   ಭೇಟಿ ನೀಡಿದ್ದರು. ತರಗತಿಯ ಬೋರ್ಡ್ ನಲ್ಲಿ ಕಾರಟಗಿ ಅಂಗನವಾಡಿ ಕೇಂದ್ರ, JP ನಗರ, ಉದ್ಘಾಟನಾ ಸಮಾರಂಭ ಎಂದು ಬರೆಯಲಾಗಿತ್ತು. ಸಚಿವರು ಈ ವಾಕ್ಯದ ಕೆಳಗೆ ಶುಭವಾಗಲಿ ಎಂದು ಬರೆಯಲು ಮುಂದಾಗಿದ್ದಾರೆ. ಆದರೆ “ಶುಬವಾಗಲಿ” ಎಂದು ತಪ್ಪಾಗಿ ಬರೆದಿದ್ದಾರೆ. ಜೊತೆಗಿರುವವರು ಸಚಿವರಿಗೆ  ಹಾಗಲ್ಲ ಹೀಗೆ ಎಂದು  ಹೇಳಿಕೊಟ್ಟಿದ್ದಾರೆ, ಬಳಿಕ ಅವರು ಶುಭವಾಗಲಿ ಎಂದು ಕಷ್ಟಪಟ್ಟು ಬರೆದಿದ್ದಾರೆ.

ಶ ಅಕ್ಷರಕ್ಕೆ ಕೊಂಬು, ಬ ಅಕ್ಷರಕ್ಕೆ ತಲೆಕಟ್ಟು, ಬ ಅಕ್ಷರದ ಕೆಳಗೆ ಬಾಲ ಬರೆಯುವಂತೆ ಸಚಿವರಿಗೆ ಜೊತೆಗಿದ್ದವರು ಹೇಳಿಕೊಟ್ಟು ಕನ್ನಡ ಅಕ್ಷರ ಬರೆಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎರಡಕ್ಷರ ಕನ್ನಡ ಬರೆಯಲು ಗೊತ್ತಿಲ್ಲದವರು ಕನ್ನಡ ಮತ್ತು ಸಂಸ್ಕೃತಿ ಸಚಿವರು ಎಂದು ವ್ಯಾಪಕ ಟ್ರೋಲ್ ಆಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

 

ಇತ್ತೀಚಿನ ಸುದ್ದಿ