ಮ.ನ.ಪಾ. ಮಾಜಿ ಉಪ  ಮೇಯರ್  ಮಹಮ್ಮದ್ ಕುಂಜತ್ ಬೈಲ್ ನಿಧನಕ್ಕೆ  ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂತಾಪ

mohammad kunjath bail
09/03/2025

ಮಂಗಳೂರು:  ಮಹಾನಗರ ಪಾಲಿಕೆಯ ಮಾಜಿ ಉಪ  ಮೇಯರ್  ಮಹಮ್ಮದ್ ಕುಂಜತ್ ಬೈಲ್ ಇವರ ಅಕಾಲಿಕ ನಿಧನಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ- – ದ. ಕ. ಜಿಲ್ಲಾ ಸಮಿತಿಯು ತೀವ್ರ ಸಂತಾಪವನ್ನು ಸೂಚಿಸಿದೆ.

ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ  ಭ್ರಷ್ಟಾಚಾರ, ಸ್ವಜನಪಕ್ಷಪಾತದ ಯಾವುದೇ ಕಳಂಕವಿಲ್ಲದೆ, ತಾನು ನಂಬಿದ ಸಿದ್ಧಾಂತದೊಂದಿಗೆ ಯಾರೊಂದಿಗೂ ರಾಜಿ ಮಾಡಿಕೊಳ್ಳದ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದ ಮಹಮ್ಮದ್ ಕುಂಜತ್ ಬೈಲ್ ರವರು ಅತ್ಯಂತ ಪ್ರಾಮಾಣಿಕ ಹಾಗೂ ಅತೀ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.

ಅಪ್ಪಟ ಜಾತ್ಯತೀತ ಮನೋಭಾವವನ್ನು ಹೊಂದಿದ್ದ ಅವರು ನೇರ ನಡೆ ನುಡಿಯ ಮೂಲಕ ರಾಜಕೀಯ ಹಾಗೂ ಜನಪರ ಚಳವಳಿಯಲ್ಲಿ ತನ್ನದೇ ವರ್ಚಸ್ಸನ್ನು ಉಳಿಸಿಕೊಂಡಿದ್ದರು.ಅಲ್ಲದೆ ದಲಿತ, ಪ್ರಗತಿಪರ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಜಿಲ್ಲೆಯಲ್ಲಿ ಸಾಮರಸ್ಯವನ್ನು ಗಟ್ಟಿಗೊಳಿಸುವಲ್ಲಿ ಯುವಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರು.

ಮಹಮ್ಮದ್ ಕುಂಜತ್ ಬೈಲ್ ರವರ ಅಕಾಲಿಕ ನಿಧನವು ಜಿಲ್ಲೆಯ ಜಾತ್ಯತೀತ ಚಿಂತನೆ, ಪ್ರಗತಿಪರ ನಿಲುವು, ಸಾಮರಸ್ಯ ಬದುಕನ್ನು ಬಯಸುವ ಎಲ್ಲರಿಗೂ ತುಂಬಲಾರದ ನಷ್ಟವೇ ಸರಿ. ಮಹಮ್ಮದ್ ಕುಂಜತ್ ಬೈಲ್ ರವರ ಅಕಾಲಿಕ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ಅವರ ಕುಟುಂಬಸ್ಥರು ಹಾಗೂ ಅವರ ಅಪಾರ ಬಂಧುಗಳಿಗೆ ಪ್ರಕೃತಿ ಕರುಣಿಸಲಿ ಎಂದು ಸಂಘಟನೆಯ ಜಿಲ್ಲಾ ಸಂಚಾಲಕರು ಸದಾಶಿವ ಪಡುಬಿದ್ರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version