ಕುಂಭಮೇಳ ಕೇವಲ ಸಾಂಕೇತಿಕವಾಗಿ ನಡೆಯಲಿ | ಪ್ರಧಾನಿ ನರೇಂದ್ರ ಮೋದಿ ಮನವಿ - Mahanayaka
2:55 AM Saturday 21 - September 2024

ಕುಂಭಮೇಳ ಕೇವಲ ಸಾಂಕೇತಿಕವಾಗಿ ನಡೆಯಲಿ | ಪ್ರಧಾನಿ ನರೇಂದ್ರ ಮೋದಿ ಮನವಿ

modi
17/04/2021

ನವದೆಹಲಿ: ಕೊರೊನಾ ಸಂದರ್ಭದಲ್ಲಿ ಮೆಗಾ ಕುಂಭಮೇಳ ಕೇವಲ ಸಾಂಕೇತಿಕವಾಗಿ ನಡೆಯಲಿದ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ತಿಳಿಸಿದ್ದು, ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಿದರೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ಉತ್ತೇಜನ ಸಿಗುತ್ತದೆ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

 

ಗಂಗಾ ನದಿಯ ತೀರದಲ್ಲಿ ಸಾವಿರಾರು ಯಾತ್ರಿಕರು ಕುಂಭ ಮೇಳದಲ್ಲಿ ಭಾಗವಹಿಸಲು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ದೇಶದಲ್ಲಿ ಕೊರೋನದ ಎರಡನೇ ಅಲೆ ಇರುವುದರಿಂದ ಇಲ್ಲಿನ ಜನಸಂದಣಿಯು ಕಳವಳ ಉಂಟು ಮಾಡಿತ್ತು. ಈ ಬಗ್ಗೆ ತಾನು ಜುನ ಅಖಾಡದ ಸ್ವಾಮಿ ಅವಧೇಶಾನಂದ ಗಿರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಧಾರ್ಮಿಕ ಸಭೆಯ ಬಗ್ಗೆ ಮನವಿ ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.


Provided by

 

ಕುಂಭಮೇಳವನ್ನು ಸಾಂಕೇತಿಕವಾಗಿ ನಡೆಸಬೇಕು ಎಂದು ನಾನು ಮನವಿ ಮಾಡಿದ್ದೇನೆ ಎಂದು ಪಿಎಂ ಹೇಳಿದ್ದಾರೆ ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಗೆ ಸ್ವಾಮಿ ಅವಧೇಶಾನಂದ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿಯವರ ಮನವಿಯನ್ನು ನಾವು ಗೌರವಿಸುತ್ತೇವೆ. ಜೀವಗಳನ್ನು ಉಳಿಸುವುದು ಪವಿತ್ರ ಕೆಲಸವಾಗಿದೆ. ಪವಿತ್ರ ಸ್ನಾನಕ್ಕಾಗಿ ಜನರು ದೊಡ್ಡ ಸಂಖ್ಯೆಯಲ್ಲಿ ಒಟ್ಟುಗೂಡಬಾರದು. ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಬೇಕೆಂದು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ